Advertisement

ರಾಜಸ್ತಾನಕ್ಕೆ ಮರಳಿದ 22 ಜನರಿಗೆ ಬೀಳ್ಕೊಡುಗೆ

10:33 AM May 22, 2020 | Suhan S |

ಖಾನಾಪುರ: ಪಟ್ಟಣದಲ್ಲಿ ಕಬ್ಬಿನ ರಸ ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದ ಆರು ಕುಟುಂಬಗಳು ಲಾಕ್‌ ಡೌನ್‌ದಿಂದ ಸಮಸ್ಯೆಗೆ ಸಿಲುಕಿ ಕೊನೆಗೂ ತಮ್ಮ ತವರು ರಾಜಸ್ತಾನಕ್ಕೆ ತೆರಳಿವೆ. ಬಿಜೆಪಿ ಮುಖಂಡ ರಾಜೇಂದ್ರ ರಾಯಕಾ ಈ ಕುಟುಂಬಗಳು ಮರಳಲು ಸಹಾಯ ಮಾಡಿದ್ದಾರೆ.

Advertisement

ಕಳೆದ ಎರಡು ತಿಂಗಳಿಂದ ಉದ್ಯೋಗ ಇಲ್ಲದೇ ಈ ಕುಟುಂಬಗಳು ಪರದಾಡುವಂತಾಗಿತ್ತು. ಕಬ್ಬಿನ ರಸ ಮಾರುವ ಗೋಟುಸಿಂಗ ಮತ್ತು ಕಿಶನಲಾಲ್‌ ಅವರು ರಾಜೇಂದ್ರ ರಾಯಕಾ ಅವರನ್ನು ಭೇಟಿಯಾಗಿ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ರಾಯಕಾ ಇ-ಪಾಸ್‌ ವ್ಯವಸ್ಥೆ ಮಾಡಿ ಅವರನ್ನು ಕಳುಹಿಸಿದ್ದಾರೆ.

ರಾಜೇಂದ್ರ ರಾಯಕಾ, ಬಿಜೆಪಿ ಬ್ಲಾಕ್‌ ಅಧ್ಯಕ್ಷ ಸಂಜಯ ಕುಬಲ್‌, ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ, ಮಹಾಂತೇಶ ಬಾಳೇಕುಂದ್ರಿ, ತಾನಾಜಿ ಗೊರಲ್‌, ಹರ್ಷಾ ರಾಯಕಾ, ಗುಲಾಬ ಜೈನ್‌ ಇತರರು ಬಸ್‌ ನಿಲ್ದಾಣದಲ್ಲಿ ರಾಜಸ್ತಾನಿ ಕುಟುಂಬಗಳನ್ನು ಬೀಳ್ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next