Advertisement

Belthangady ವಿದ್ಯುತ್‌ ಪ್ರವಹಿಸಿ ಕಾರ್ಮಿಕ ಸಾವು

10:12 PM Nov 24, 2023 | Team Udayavani |

ಬೆಳ್ತಂಗಡಿ: ತೋಟದಲ್ಲಿ ಸೊಪ್ಪು ಕಡಿಯುವುದಕ್ಕಾಗಿ ಅಲ್ಯೂಮಿನಿಯಂ ಏಣಿ ಹಿಡಿದುಕೊಂಡು ಹೋಗುತ್ತಿದ್ದ ವೇಳೆ ಏಣಿಯು ವಿದ್ಯುತ್‌ ತಂತಿಗೆ ತಾಗಿ ಶಾಕ್‌ ಹೊಡೆದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಶುಕ್ರವಾರ ಧರ್ಮಸ್ಥಳ ಸಮೀಪದ ಮಲ್ಲರ್ಮಾಡಿಯಲ್ಲಿ ನಡೆದಿದೆ.

Advertisement

ಧರ್ಮಸ್ಥಳ ಗ್ರಾಮದ ಮಲ್ಲರ್ಮಾಡಿ ನಿವಾಸಿ ಬಾಲಕೃಷ್ಣ ಶೆಟ್ಟಿ (49) ಮೃತರು. ಅವರು ಸ್ಥಳೀಯ ನಿವಾಸಿ ಬೊಮ್ಮಣ್ಣ ಗೌಡ ಅವರ ತೋಟದ ಕೆಲಸಕ್ಕೆ ಹೋಗಿದ್ದು, ಅಲ್ಲಿ ಮರದ ಸೊಪ್ಪು ಕಡಿಯುವುದಕ್ಕಾಗಿ ಅಲ್ಯೂಮಿನಿಯಂ ಏಣಿ ಹಿಡಿದುಕೊಂಡು ಹೋಗುವ ವೇಳೆ ವಿದ್ಯುತ್‌ ತಂತಿಗೆ ಸ್ಪರ್ಶವಾಗಿದೆ.

ಈ ವೇಳೆ ಶಾಕ್‌ನಿಂದ ಬಾಲಕೃಷ್ಣ ಅವರು ಗಂಭೀರ ಗಾಯಗೊಂಡು ಕುಸಿದು ಬಿದ್ದಿದ್ದಾರೆ. ತತ್‌ಕ್ಷಣ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆ ತರುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಘಟನ ಸ್ಥಳಕ್ಕೆ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕ್ಲೆಮೆಂಟ್‌ ಬೆಂಜಮಿನ್‌ , ಸಹಾಯಕ ಎಂಜಿನಿಯರ್‌ ಸುಹಾಸ್‌, ಮೇಲ್ವಿಚಾರಕ ಅಶೋಕ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next