Advertisement

ಕಾಂಗ್ರೆಸ್‌ ಗೆಲ್ಲಿಸಲು ಪ್ರಾಮಾಣಿಕವಾಗಿ ದುಡಿಯಿರಿ: ಅಭಯಚಂದ್ರ ಜೈನ್‌

12:46 PM Apr 20, 2018 | Team Udayavani |

ಮೂಡಬಿದಿರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷಗಳಲ್ಲಿ ಕರ್ನಾಟಕವನ್ನು ಹಸಿವು ಮುಕ್ತ, ಸ್ವಾಭಿಮಾನಿ ಬದುಕಿನ ರಾಜ್ಯವನ್ನಾಗಿ ರೂಪಿಸಿದವರು. ಅವರ ಕೈ ಬಲಪಡಿಸಲು ಈ ಬಾರಿಯ ಚುನಾವಣೆಯಲ್ಲಿ ಜನರನ್ನು ಪ್ರೇರೇಪಿಸುವ ಕಾರ್ಯದಲ್ಲಿ ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿಯಬೇಕಾಗಿದೆ ಎಂದು ಶಾಸಕ, ಮಾಜಿ ಸಚಿವ ಕೆ. ಅಭಯಚಂದ್ರ ಹೇಳಿದರು.

Advertisement

ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಐದನೇ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿರುವ ಅಭಯಚಂದ್ರ ಅವರು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶಾಹುಲ್‌ ಹಮೀದ್‌ ಮಾತನಾಡಿದರು. ಜಿ.ಪಂ. ಸದಸ್ಯ ಧರಣೇಂದ್ರ ಕುಮಾರ್‌, ವಿಜಯಕುಮಾರ ಶೆಟ್ಟಿ , ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾಲೆಟ್‌ ಪಿಂಟೋ, ರವಿ ಪೂಜಾರಿ ಸೂರಿಂಜೆ, ಶಶಿಕಾಂತ ಶೆಟ್ಟಿ , ನೆಲ್ಸನ್‌, ರಾಘು ಪೂಜಾರಿ, ವಲೇರಿಯನ್‌ ಸಿಕ್ವೇರ ಮೂಡಬಿದಿರೆ, ರಾಮಚಂದ್ರ ಶೆಟ್ಟಿ ಬಜಪೆ, ಧನಂಜಯ ಮಟ್ಟು, ಜೆ.ಎಂ. ಹಾಜಿ ಜೋಕಟ್ಟೆ, ಸುಪ್ರಿಯಾ ಡಿ. ಶೆಟ್ಟಿ, ಮುಲ್ಕಿ ಬ್ಲಾಕ್‌ ಅಧ್ಯಕ್ಷೆ ಪದ್ಮಾವತಿ, ಮಂಗಳೂರು ಕಾರ್ಪೋರೇಟರ್‌ ಪ್ರತಿಭಾ ಕುಳಾಯಿ, ಕೆಪಿಸಿಸಿ ಸದಸ್ಯ ಸಂಜೀವ ಮೊಯಿಲಿ, ತಾ.ಪಂ. ಸದಸ್ಯರು, ಗ್ರಾ.ಪಂ. ಅಧ್ಯಕ್ಷರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next