Advertisement
ರಾಜ್ಯದಲ್ಲಿ ಐದನೇ ಸ್ಥಾನಕುಂದಾಪುರದಲ್ಲಿ ಐದನೇ ಬಾರಿ ಗೆದ್ದ ಹಾಲಾಡಿ ಶ್ರೀನಿವಾಸ ಶೆಟ್ಟ ವಿರುದ್ಧ ಟಿಕೆಟ್ ಘೋಷಣೆಯಾದಾಗ ಒಂದಷ್ಟು ಬಿನ್ನಮತ ಕಾಣಿಸಿತು. ಆದರೆ ಅದಕ್ಕೆಲ್ಲ ಉತ್ತರವಾಗಿ ಅವರು ಕರಾವಳಿಯ (ಅವಿಭಜಿತ ದ.ಕ. ಜಿಲ್ಲೆ) ಇತಿಹಾಸದಲ್ಲೇ ಒಂದು ಲಕ್ಷ ಮತ ಪಡೆದ ಮೊದಲ ಅಭ್ಯರ್ಥಿ ಎನಿಸಿಕೊಂಡರು. ಕರಾವಳಿಯ ಇತಿಹಾಸದಲ್ಲೇ ಅತ್ಯಧಿಕ ಮತಗಳ ಅಂತರದಲ್ಲಿ ಗೆದ್ದವರು ಎಂಬ ಸಾಧನೆ ಮುಡಿಗೇರಿಸಿಕೊಂಡರು.
ಅಂದ ಹಾಗೇ ಇದು ಹಾಲಾಡಿಯವರ ಸತತ ಐದನೇ ಗೆಲುವು. ಪ್ರತಿ ಬಾರಿ ಗೆಲುವಿನ ಅಂತರ ಹೆಚ್ಚುತ್ತಲೆ ಹೋಗಿದೆ. 1999 ರಲ್ಲಿ ಮೊದಲ ಬಾರಿ ಹಾಲಾಡಿ ಅವರು ಚುನಾವಣೆಗೆ ಸ್ಪರ್ಧಿಸಿದಾಗ ಪಡೆದ ಒಟ್ಟು ಮತಗಳು 48,051. ಆದರೆ ಈ ಬಾರಿ ಗೆಲುವಿನ ಅಂತರವೇ 56,405 ಮತಗಳು. 1999ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪ್ ಚಂದ್ರ ಶೆಟ್ಟಿ ಪಡೆದ ಮತ 47,030. ಅದಕ್ಕಿಂತ ಹೆಚ್ಚು ಮತ ಈ ತನಕ, ಎರಡು ದಶಕಗಳ ಅವಧಿಯಲ್ಲಿ ಕಾಂಗ್ರೆಸ್ ಪಡೆದಿಲ್ಲ. ಈ ಬಾರಿ ಕಾಂಗ್ರೆಸ್ ಪಡೆದ ಮತ 47,029. ಇಪ್ಪತ್ತು ವರ್ಷಗಳಲ್ಲಿ ಹತ್ತಿರತ್ತಿರ ಒಂದು ಲಕ್ಷ ಮತದಾರರು ಹೆಚ್ಚಾಗಿದ್ದಾರೆ, ಆದರೆ ಕಾಂಗ್ರೆಸ್ ಹಾಲಾಡಿ ವಿರುದ್ಧ ಮತಗಳಿಗೆ ಹೆಚ್ಚಿಸಿಕೊಳ್ಳಲು ಪ್ರಯತ್ನಪಡುತ್ತಿದೆ. ಹಾಲಾಡಿ ಗೆಲುವಿನ ಅಂತರ ಪ್ರತೀ ಬಾರಿ ಹೆಚ್ಚುತ್ತ ಹೋಗಿದೆ.1999- 1,021 ಮತಗಳು, 2004- 19,665 ಮತಗಳು, 2008- 25,083 ಮತಗಳು, 2013- 40,611 (ಪಕ್ಷೇತರರಾಗಿ), 2018- 56,405 ಮತಗಳ ಅಂತರದಿಂದ ಗೆದ್ದಿ ದ್ದಾರೆ. ಈ ಬಾರಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದರೆ ಹಾಲಾಡಿಯವರಿಗೆ ಸಚಿವ ಸ್ಥಾನ ನಿರೀಕ್ಷಿಸಲಾಗಿತ್ತು. ಆದರೆ ಸದ್ಯಕ್ಕೆ ಅವಕಾಶ ತಪ್ಪಿದೆ.
Related Articles
ಜೆಡಿಎಸ್ಗೆ ಎರಡೂ ಜಿಲ್ಲೆಗಳಲ್ಲಿ ಆಯ್ಕೆಯಾದ ಶಾಸಕರಿಲ್ಲ. ಆದ್ದರಿಂದ ಜೆಡಿಎಸ್ನಿಂದ ಸ್ಪರ್ಧಿಸಿದವರಿಗೆ ಸರಕಾರದಲ್ಲಿ ಯಾವುದಾದರೂ ಸ್ಥಾನ ದೊರೆಯಬಹುದೇ ಎಂಬ ನಿರೀಕ್ಷೆ ಇದೆ. ಕುಂದಾಪುರದಲ್ಲಿ ತೆಕ್ಕಟ್ಟೆ ಪ್ರಕಾಶ್ ಶೆಟ್ಟಿ, ಬೈಂದೂರಿನಿಂದ ರವಿ ಶೆಟ್ಟಿ , ಕಾಪುವಿನಲ್ಲಿ ಮನ್ಸೂರ್ ಇಬ್ರಾಹಿಂ , ಉಡುಪಿಯಲ್ಲಿ ಗಂಗಾಧರ ಭಂಡಾರಿ ಅವರು ಸ್ಪರ್ಧಿಸಿದ್ದು ಮತ ಗಳಿಕೆಯಲ್ಲಿ ನಿರೀಕ್ಷಿತ ಸಾಧನೆ ಇಲ್ಲದಿದ್ದರೂ ಜೆಡಿಎಸ್ ಅಸ್ತಿತ್ವಕ್ಕಾಗಿ ಹೋರಾಡಿದ್ದಾರೆ ಎನ್ನುವುದು ಇವರಿಗೆ ಇರುವ ಪ್ಲಸ್ ಪಾಯಿಂಟ್. ಕರಾವಳಿಯಲ್ಲಿ ಜೆಡಿಎಸ್ ಇಲ್ಲದಿರುವಾಗ ಪಕ್ಷದ ಉಳಿವಿಗೆ ಇವರ ಸ್ಪರ್ಧೆ ಗಮನಾರ್ಹ. ಆದ್ದರಿಂದ ಸಮ್ಮಿಶ್ರ ಸರಕಾರ ಬಂದಾಗ ಇವರ ಪಾಲಿಗೆ ಅಧಿಕಾರದ ಶಕ್ತಿ ಕೇಂದ್ರ ಹತ್ತಿರವಾಗಿದೆ. ಅಂತೂ ಕರಾವಳಿಯಲ್ಲಷ್ಟೇ ಅಲ್ಲ ರಾಜ್ಯದಲ್ಲೇ ಗೆದ್ದವರಿಗೆ ದಕ್ಕಲಿಲ್ಲ, ಬಿದ್ದವರಿಗೆ ಸೋಲಿಲ್ಲ ಎಂದಾಗಿದೆ. ಮೂರೂ ಪಕ್ಷದ ಕಾರ್ಯಕರ್ತರು ಬೇರೆ ಬೇರೆ ಕಾರಣಗಳಿಗೆ ವಿಜಯೋತ್ಸಾಹದಲ್ಲಿದ್ದಾರೆ.
Advertisement
ಕಾಂಗ್ರೆಸ್ಗೆ ಸಚಿವ ಪದವಿಯಾದರೆಕಾಂಗ್ರೆಸ್ನಿಂದ ಪ್ರತಾಪಚಂದ್ರ ಶೆಟ್ಟರೇ ಸದ್ಯ ಸಮರ್ಥ ಅಭ್ಯರ್ಥಿಯಾಗಿದ್ದು ಅವರಿಗೇ ಸಚಿವ ಸ್ಥಾನ ನಿರೀಕ್ಷಿಸಲಾಗಿದೆ. 4 ಬಾರಿ ಶಾಸಕರಾಗಿ, 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಅವರು ಅನುಭವಿ ಹಾಗೂ ಹಿರಿಯರು. ಇವರ ಹೊರತಾಗಿ ಉಡುಪಿ ಜಿಲ್ಲೆಯಲ್ಲಿಯೇ ಬೇರೆ ಕಾಂಗ್ರೆಸ್ ಜನಪ್ರತಿನಿಧಿಗಳಿಲ್ಲ. ಇವರಲ್ಲದಿದ್ದರೆ ಹೊರಗಿನ ಜಿಲ್ಲೆಯ ಜನಪ್ರನಿಧಿಗಳನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು. ಆಗ ಪಕ್ಷ ಸಂಘಟನೆಗೆ ತೊಡಕಾಗುತ್ತದೆ. ಈಗಾಗಲೇ ಎಲ್ಲ ಸ್ಥಾನಗಳನ್ನು ಕಳೆದುಕೊಂಡ ಕಾಂಗ್ರೆಸ್ಗೆ ಇದು ಕಷ್ಟವಾದರೆ ಬಿಜೆಪಿಗೆ ಇಷ್ಟವಾಗುತ್ತದೆ. – ವಿಶೇಷ ವರದಿ