Advertisement
1820ರಿಂದ ಐದು ವರ್ಷಗಳ ಕಾಲ ಬೆಂಜಮಿನ್ ಸ್ವಾಮಿನ್ ವಾರ್ಡ್ ಮತ್ತು ಪೀಟರ್ ಐರ್ ಕೊನ್ನರ್ ಎಂಬವರು ವಿವಿಧ ರೀತಿಯಲ್ಲಿ ಅಧ್ಯಯನ ಮತ್ತು ಸಂಶೋಧನೆ ನಡೆಸಿದ್ದರು. ಮಹಿಳೆಯರ ಪ್ರವೇಶ ನಿಷೇಧದ ಪದ್ಧತಿ 2 ಶತಮಾನಗಳ ಹಿಂದೆಯೇ ಜಾರಿಯಾಗಿತ್ತು ಎಂದು ಕಂಡು ಕೊಂಡಿದ್ದರು. 1893 ಮತ್ತು 1901ರಲ್ಲಿ ಎರಡು ಭಾಗಗಳಲ್ಲಿ “ಮೆಮೊಯಿರ್ ಆಫ್ ದ ಸರ್ವೆ ಟ್ರಾವಂಕೂರ್ ಆ್ಯಂಡ್ ಕೊಚ್ಚಿನ್ ಸ್ಟೇಟ್ಸ್’ ಎಂಬ ಶೀರ್ಷಿಕೆಯ ಅಡಿ ಅಧ್ಯಯನ ವರದಿ ಪ್ರಕಟವಾಗಿದೆ. ಅಂದಿನ ಮದ್ರಾಸ್ ಸರಕಾರ ಪ್ರಕಟಿಸಿದ್ದ ಈ ಅಧ್ಯಯನದಲ್ಲಿ 2 ಶತಮಾನಗಳ ಹಿಂದೆಯೇ ಮಹಿಳೆ ಯರ ನಿಷೇಧ ಜಾರಿಯಲ್ಲಿತ್ತು ಎಂಬ ಅಂಶ ಉಲ್ಲೇಖವಿದೆ. ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲಾ ವಯೋಮಿತಿಯ ಮಹಿಳೆಯರು ಪ್ರವೇಶಿಸಬಹುದು ಎಂದು ಸೆ.28ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಆಕ್ರೋಶ ಮುಂದುವರಿದಿರುವಂತೆಯೇ ಈ ಕುತೂಹಲಕಾರಿ ಅಂಶದ ಬಗ್ಗೆ “ಪಿಟಿಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ.
Related Articles
Advertisement
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು: ಆಗಿನ ಕಾಲದಲ್ಲಿಯೇ ಭಾರೀ ಸಂಖ್ಯೆಯಲ್ಲಿ ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಿದ್ದರು ಎಂಬ ಬಗ್ಗೆ ಉಲ್ಲೇಖೀಸಲಾಗಿದೆ. ದೂರದ ಪ್ರದೇಶಗಳಿಂದಲೂ 10-15 ಸಾವಿರ ಮಂದಿ ಭೇಟಿ ನೀಡುತ್ತಿದ್ದರು ಎಂಬ ಪ್ರಸ್ತಾಪವಿದೆ.
ಸಚಿವರ ಕಾರು ತಡೆದಿಲ್ಲ: ಬುಧವಾರ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ರ ಕಾರನ್ನು ತಡೆಯಲಾಗಿತ್ತು ಎಂಬ ವರದಿ ಗಳನ್ನು ಪೊಲೀಸರು ನಿರಾಕರಿಸಿದ್ದಾರೆ. ಪ್ರತಿಭಟನಕಾರರು ಸಚಿವರ ಬೆಂಗಾವಲು ವಾಹನದಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಶಂಕೆ ಹಿನ್ನೆಲೆಯಲ್ಲಿ ಒಂದು ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಲಾಗಿತ್ತು. ಆದರೆ ಬಿಜೆಪಿ ಕಾರ್ಯಕರ್ತರು, ಅಲ್ಲಲ್ಲಿ ಸಚಿವರ ಕಾರನ್ನು ತಡೆ ತಪಾಸಣೆ ನಡೆಸಲಾಗಿತ್ತು ಎಂದು ದೂರಿದ್ದಾರೆ.
ಅರ್ಚಕ ಅಮಾನತುಈ ನಡುವೆ, ಸಾಮಾಜಿಕ ಜಾಲತಾಣದಲ್ಲಿ ಕೇರಳ ಮುಜರಾಯಿ ಸಚಿವ ಕಡಕಂಪಳ್ಳಿ ಸುರೇಂದ್ರನ್ ವಿರುದ್ಧ ಆಕ್ಷೇಪಾರ್ಹ ಮಾಹಿತಿ ಅಪ್ಲೋಡ್ ಮಾಡಿದ್ದಕ್ಕಾಗಿ ಕಾಞಂಗಾಡ್ಮೈದ್ಯನ್ ಕೂಲಂ ಕ್ಷೇತ್ರ ಪಲಕ್ಕ ದೇಗುಲದ ಮುಖ್ಯ ಅರ್ಚಕ ಟಿ.ಮಾಧವನ್ ನಂಬೂದಿರಿ ಅವರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ. ತಾವು ಕ್ಷೇತ್ರದ ಆನುವಂಶಿಕ ಟ್ರಸ್ಟಿಯಾಗಿದ್ದರಿಂದ ಆದೇಶ ಅನ್ವಯವಾಗುವುದಿಲ್ಲ ಎಂದು ನಂಬೂದಿರಿ ಹೇಳಿಕೊಂಡಿದ್ದಾರೆ.