Advertisement

ಮನೆ ಮೇಲೆ ಹಾಕಿದ್ದ ಟರ್ಪಾಲ್‌ ತೆಗೆಯುವ ವೇಳೆ ವಿದ್ಯುತ್‌ ತಂತಿ ತಗುಲಿ ಮಹಿಳೆ ಸಾವು

05:10 PM Jul 14, 2022 | Team Udayavani |

ಕುಳಗೇರಿ ಕ್ರಾಸ್: ವಿದ್ಯುತ್ ತಗುಲಿ ಮಹಿಳೆಯೋರ್ವಳು ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಗಡಿ ಭಾಗದಲ್ಲಿರುವ ಗೋವನಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದಿದೆ.

Advertisement

ದೇವಕ್ಕ ಬಸವರಾಜ ಮೊರಬದ (25) ಮೃತಪಟ್ಟ ಮಹಿಳೆ.

ದೇವಕ್ಕ ತಮ್ಮ ಮನೆಯ ಮೇಲೆ ಹಾಸಿದ್ದ ಟರ್ಪಾಲ್‌ ತೆಗೆಯಲು ಹೋಗಿ ಮನೆಗೆ ಸಂಪರ್ಕದಲ್ಲಿದ್ದ ಸರ್ವಿಸ್ ಜೇ ವೈಯರ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ನಿರಂತರ ಮಳೆಗೆ ಸೋರುತ್ತಿರುವ ಮನೆಯ ಮೇಲ್ಬಾಗದಲ್ಲಿ ಸೋರದಂತೆ ಟರ್ಪಾಲ್‌ ಹಾಕಲಾಗಿತ್ತು. ಇಂದು ಮಳೆರಾಯ ಕೊಂಚ ಬಿಡುವು ಕೊಟ್ಟಿದ್ದು ತಾಡಪಾಲು ತೆಗೆಯಲು ಹೋಗಿ ಈ ಘಟನೆ ಸಂಬವಿಸಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಅಂಗನವಾಡಿ ಮಕ್ಕಳಿಗೆ ಕಳಪೆ ಆಹಾರ ನೀಡಬೇಡಿ -ಸಚಿವ ಆಚಾರ ಹಾಲಪ್ಪ ಬಸಪ್ಪ

Advertisement

ಸ್ಥಳಕ್ಕೆ ಕಾಕನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಶಶಿರೇಖಾ ಹಲಗಲಿಮಠ, ಬಾದಾಮಿ ಪಿಎಸ್‌ಐ ನೇತ್ರಾವತಿ ಪಾಟೀಲ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next