Advertisement

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

08:20 PM Apr 16, 2024 | Team Udayavani |

ಕಾಸರಗೋಡು: ಸಾಲವಾಗಿ ನೀಡಿದ ಹಣ ಹಿಂದಿರುಗಿ ಕೇಳಿದ ಮಹಿಳೆಯ ಮೈಮೇಲೆ ನಡುರಸ್ತೆಯಲ್ಲಿ ಪೆಟ್ರೋಲ್‌ ಸುರಿದು ಆಕೆಯನ್ನು ಕೊಲೆಗೈಯ್ಯಲೆತ್ನಿಸಿದ ಘಟನೆ ನಡೆದಿದೆ.

Advertisement

ಹೊಸದುರ್ಗ ಕೊಡಕ್ಕಾಡ್‌ ನಿವಾಸಿ 41ರ ಹರೆಯದ ಮಹಿಳೆ ಈ ಬಗ್ಗೆ ವೆಳ್ಳರಿಕುಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಪ್ರಶಾಂತ್‌ ಆಲಿಯಾಸ್‌ ದೀಪು ವಿರುದ್ಧ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ.

ಕೊಡಕ್ಕಾಡ್‌ ಪೇಟೆಯಲ್ಲಿ ಎರಡು ಪ್ಲಾಸ್ಟಿಕ್‌ ಬಾಟಲಿಯಲ್ಲಿ ಪೆಟ್ರೋಲ್‌ ತುಂಬಿಸಿ ಬಂದ ಆರೋಪಿ ಅದನ್ನು ತನ್ನ ಮೈಮೇಲೆ ಸುರಿದು ಬೆಂಕಿ ಕಡ್ಡಿಯಿಂದ ಬೆಂಕಿ ಹಚ್ಚಲು ಯತ್ನಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next