Advertisement

ವರದಕ್ಷಿಣೆ ಕಿರುಕುಳ : ಗೃಹಿಣಿ ಆತ್ಮಹತ್ಯೆ

09:41 PM Mar 04, 2021 | Team Udayavani |

ಮದ್ದೂರು: ವರದಕ್ಷಿಣೆ ಕಿರುಕುಳದಿಂದ ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕೆಸ್ತೂರು ಪೊಲೀಸ್‌ ಠಾಣಾ ವ್ಯಾಪ್ತಿಯಯ ರಗನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.

Advertisement

ಯರಗನಹಳ್ಳಿ ಗ್ರಾಮದ ಕಿರಣ್‌ಕುಮಾರ್‌ ಪತ್ನಿಮೇಘನಾ(27) ನೇಣಿಗೆ ಶರಣಾದ ಗೃಹಿಣಿ. ಮೃತಳಿಗೆ ಒಂದು ವರ್ಷದ ಗಂಡುವಿದೆ. ಕಳೆದ ಎರಡುವರ್ಷಗಳ ಹಿಂದೆ ಸಾದೊಳಲು ಗ್ರಾಮದಮಂಗಳ, ಬಲ್ಲೇಗೌಡ ದಂಪತಿ ಪುತ್ರಿಯನ್ನು ಯರಗನಹಳ್ಳಿ ಗ್ರಾಮದ ಮರಿಸ್ವಾಮಿ ಪುತ್ರಕಿರಣ್‌ಕುಮಾರ್‌ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿ ಸಣ್ಣಪುಟ್ಟ ವಿಚಾರಗಳಿಗೆಲ್ಲ ಜಗಳತೆಗೆದು ಪ್ರತಿನಿತ್ಯ ಮನೆಯಲ್ಲಿ ವರದಕ್ಷಿಣೆ ತರುವಂತೆ ಮಾನಸಿಕ ಕಿರುಕುಳ ನೀಡುವ ಜತೆಗೆ ಕುಟುಂಬಸ್ಥರು ಮೇಘನಾ ಮೇಲೆ ಹಲ್ಲೆ ಮಾಡಿದ್ದರು. ಬುಧವಾರ ಪತಿಪತ್ನಿ ನಡುವೆ ಜಗಳ ನಡೆದು ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಮನನೊಂದ ಮೇಘನಾ ಮನೆಕೊಠಡಿಯೊಂದರಲ್ಲಿ ನೇಣಿಗೆ ಶರಣಾಗಿದ್ದು, ಈ ಸಂಬಂಧ ಪತಿ ಕಿರಣ್‌ಕುಮಾರ್‌ ಸೇರಿದಂತೆ ಈತನ ಪೋಷಕರನ್ನು ಕೆಸ್ತೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿ‌ನಿ, ಡಿವೈಎಸ್‌ಪಿ ಲಕ್ಷ್ಮೀ ನಾರಾಯಣ ಪ್ರಸಾದ್‌ ಹಾಗೂ ವೃತ್ತನಿರೀಕ್ಷಕ ಕೆ.ಆರ್‌. ಪ್ರಸಾದ್‌ ಭೇಟಿ ನೀಡಿಅಗತ್ಯ ಕ್ರಮವಹಿಸಿದ್ದಾರೆ. ಈ ಸಂಬಂಧಮೃತಳ ತಂದೆ ಬಲ್ಲೇಗೌಡ ನೀಡಿದ ದೂರಿನಮೇರೆಗೆ ಕೆಸ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next