Advertisement

ತನ್ನಿಷ್ಟದಂತೆ ಬ್ಲೌಸ್ ಯಾಕೆ ಹೊಲಿದಿಲ್ಲ ಎಂದು ಪತಿ ಬೈದಿದ್ದಕ್ಕೆ ನೇಣಿಗೆ ಶರಣಾದ ಪತ್ನಿ!

03:06 PM Dec 07, 2021 | Team Udayavani |

ಹೈದರಾಬಾದ್: ತಾನು ಹೇಳಿದಂತೆ ಬ್ಲೌಸ್ (ರವಿಕೆ) ಹೊಲಿದು ಕೊಟ್ಟಿಲ್ಲ ಯಾಕೆ ಪತಿ ಬೈದಿದ್ದಕ್ಕೆ ಕೋಪಗೊಂಡು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನ ಅಂಬರ್ ಪೇಟ್ ನಲ್ಲಿ ನಡೆದಿದೆ.

Advertisement

ಇದನ್ನೂ ಓದಿ:ಪರಿಷತ್ ನಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲವಿಲ್ಲ: ಹೆಚ್ ಡಿಕೆ ಮಾತಿಗೆ ನೋ ಕಮೆಂಟ್ ಎಂದ ಸಿಎಂ

ಎನ್ ಡಿಟಿವಿ ವರದಿ ಪ್ರಕಾರ, ಹೈದರಾಬಾದ್ ನ ಅಂಬರ್ ಪೇಟ್ ನ ಗೋಲ್ನಾಕಾ ತಿರುಮಲ ನಗರ್ ಪ್ರದೇಶದಲ್ಲಿ ವಿಜಯಲಕ್ಷ್ಮಿ ಹಾಗೂ ಪತಿ, ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಪತಿ ಟೈಲರ್ ವೃತ್ತಿ ಮಾಡುತ್ತಿದ್ದು, ತನ್ನಷ್ಟದಂತೆ ಬ್ಲೌಸ್ ಹೊಲಿದಿಲ್ಲ ಎಂಬ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು.

ಶ್ರೀನಿವಾಸ್ ಸೀರೆ ಮತ್ತು ಬ್ಲೌಸ್ ಮೆಟಿರೀಯಲ್ಸ್ ಅನ್ನು ಮನೆ, ಮನೆಗೆ ಮಾರಾಟ ಮಾಡುತ್ತಿದ್ದು, ಮನೆಯಲ್ಲಿ ಬ್ಲೌಸ್ ಹೊಲಿದುಕೊಡುತ್ತಿದ್ದರು. ಮನೆಯಲ್ಲಿ ಪತ್ನಿಯೂ ಬ್ಲೌಸ್ ಹೊಲಿಯುವ ಕೆಲಸ ಮಾಡುತ್ತಿದ್ದಳು. ಏತನ್ಮಧ್ಯೆ ಪತ್ನಿ ಹೊಲಿದ ಬ್ಲೌಸ್ ಸರಿಯಾಗಿಲ್ಲ ಎಂದು ಪತಿ ಶ್ರೀನಿವಾಸ್ ಹೇಳಿದ್ದು, ಮತ್ತೊಮ್ಮೆ ಹೊಲಿಗೆ ಬಿಡಿಸಿ ಬ್ಲೌಸ್ ಹೊಲಿಯುವಂತೆ ಹೇಳಿದ್ದರು. ಬಳಿಕ ಶ್ರೀನಿವಾಸ್ ಬ್ಲೌಸ್ ನ ಹೊಲಿಗೆ ತೆಗೆದುಕೊಟ್ಟು, ಪತ್ನಿ ವಿಜಯಲಕ್ಷ್ಮಿ ಬಳಿ ತಾನು ಹೇಳಿದಂತೆ ಹೊಲಿದುಕೊಡುವಂತೆ ತಿಳಿಸಿರುವುದಾಗಿ ವರದಿ ವಿವರಿಸಿದೆ.

ಇದರಿಂದ ಅಸಮಾಧಾನಗೊಂಡ ವಿಜಯಲಕ್ಷ್ಮೀ ಮನೆಯ ಕೋಣೆಯೊಳಗೆ ಹೋಗಿ ಲಾಕ್ ಮಾಡಿಕೊಂಡಿದ್ದಳು. ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಬೆಡ್ ರೂಂ ಬಂದ್ ಆಗಿರುವುದನ್ನು ಕಂಡು, ಬಾಗಿಲು ಬಡಿದ್ದರು, ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲವಾಗಿತ್ತು. ನೆರಮನೆಯವರು ಕೂಡಲೇ ಪತಿಗೆ ವಿಷಯ ತಿಳಿಸಿದಾಗ, ಮನೆಗೆ ಬಂದು ಕೋಣೆ ಬಾಗಿಲನ್ನು ಒಡೆದು ನೋಡಿದಾಗ ಪತ್ನಿ ನೇಣಿಗೆ ಶರಣಾಗಿದ್ದು ಕಂಡುಬಂದಿತ್ತು ಎಂದು ವರದಿ ಹೇಳಿದೆ.

Advertisement

ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಅಂಬರ್ ಪೇಟ್ ಇನ್ಸ್ ಪೆಕ್ಟರ್ ಪಿ.ಸುಧಾಕರ್ ತಿಳಿಸಿದ್ದು, ಆತ್ಮಹತ್ಯೆಗೆ ಶರಣಾಗಿರುವ ವಿಜಯಲಕ್ಷ್ಮಿ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next