Advertisement

ಮಹಿಳೆಗೆ ಕಿರುಕುಳ ಆರೋಪಿಗೆ ಥಳಿತ

11:52 AM Jun 27, 2018 | |

ಬೆಂಗಳೂರು: ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಗಾರ್ಮೆಂಟ್ಸ್‌ ವ್ಯವಸ್ಥಾಪಕನಿಗೆ ಮಹಿಳಾ ಸಿಬ್ಬಂದಿಯೇ ಥಳಿಸಿರುವ ಘಟನೆ ವಿದ್ಯಾರಣ್ಯಪುರದ ಎಚ್‌ಎಂಟಿ ಲೇಔಟ್‌ನಲ್ಲಿ ಮಂಗಳವಾರ ನಡೆದಿದೆ.

Advertisement

ಎರ್ನೆ ಎಕೊ ಪ್ರೈವೇಟ್‌ ಲಿಮಿಟೆಡ್‌ ವ್ಯವಸ್ಥಾಪಕ ಬಸವರಾಜ್‌ ಹಲ್ಲೆಗೊಳಗಾದವ. ಆರೋಪಿ ಬಸವರಾಜ್‌ ಗಾರ್ಮೆಂಟ್ಸ್‌ನ ಮಹಿಳಾ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಮಹಿಳಾ ನೌಕರರು ಗಾರ್ಮೆಂಟ್ಸ್‌ ಮಾಲೀಕರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಒಂದು ವೇಳೆ ದೌರ್ಜನ್ಯ ಪ್ರಶ್ನಿಸಿದರೆ ವೇತನ ನೀಡುತ್ತಿರಲಿಲ್ಲ.

ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಈತನ ಕೃತ್ಯದಿಂದ ಬೇಸತ್ತ ಮಹಿಳಾ ನೌಕರರು ಮಂಗಳವಾರ ತಮ್ಮ ಮನೆಯವರು ಮತ್ತು ಸ್ಥಳೀಯರ ಸಹಕಾರದಿಂದ ಕಚೇರಿಯಲ್ಲಿಯೇ ಆರೋಪಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಯಾವುದೇ ದೂರು ಬಂದಿಲ್ಲ ಎಂದು ವಿದ್ಯಾರಣ್ಯಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next