Advertisement

ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ: ದೋಷಾರೋಪ ಪಟ್ಟಿ ಸಲ್ಲಿಕೆ- ನಟ ದರ್ಶನ್‌ ನಿರಾಳ

11:44 PM Jan 20, 2024 | Team Udayavani |

ಬೆಂಗಳೂರು: ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ ಸಂಬಂಧ ನಟ ದರ್ಶನ್‌ಗೆ ನಿರಾಳತೆ ಸಿಕ್ಕಿದೆ. ತನಿಖೆ ಪೂರ್ಣಗೊಳಿಸಿರುವ ರಾಜರಾಜೇಶ್ವರಿನಗರ ಠಾಣೆ ಪೊಲೀಸರು 150ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದು, ಘಟನೆಗೂ ನಟ ದರ್ಶನ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಉಲ್ಲೇಖೀಸಿದ್ದಾರೆ.

Advertisement

ಘಟನೆ ವೇಳೆ ದರ್ಶನ್‌ ಬೇರೆ ರಾಜ್ಯದಲ್ಲಿದ್ದರು. ಆದ್ದರಿಂದ ಇದೊಂದು “ಭದ್ರತಾ ಲೋಪ’ ಎಂದು ಉಲ್ಲೇಖೀಸಿ ದರ್ಶನ್‌ ಮನೆ ಕೆಲಸಗಾರ ಹೇಮಂತ್‌ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ.

ಹೇಮಂತ್‌, ನಟ ದರ್ಶನ್‌, ಸಂತ್ರಸ್ತೆ ಅಮಿತಾ ಜಿಂದಲ್‌ ಸಹಿತ ಹಲವರ ಹೇಳಿಕೆಯನ್ನು ದೋಷಾರೋಪ ಪಟ್ಟಿಯಲ್ಲಿ ದಾಖಲಿಸಿದ್ದಾರೆ. ಜತೆಗೆ 5ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಯನ್ನೂ ಉಲ್ಲೇಖೀಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next