Advertisement

ರಾಮನಿರುವಲ್ಲಿಯೇ ಅಯೋಧ್ಯೆ; ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅಭಿಮತ

07:39 PM Aug 29, 2021 | Team Udayavani |

ಲಕ್ನೋ/ಅಯೋಧ್ಯೆ: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಪತ್ನಿ ಸವಿತಾ ಕೋವಿಂದ್‌ ಸಹಿತ ಅಯೋಧ್ಯೆಯಲ್ಲಿರುವ ತಾತ್ಕಾಲಿಕ ದೇಗುಲ ದಲ್ಲಿರುವ ರಾಮ ವಿಗ್ರಹದ ದರ್ಶನ ಮಾಡಿದ್ದಾರೆ. ಇದರ ಜತೆಗೆ ನೂತನವಾಗಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ಕಾಮಗಾರಿ ಸ್ಥಳಕ್ಕೆ ಕೂಡ ಭೇಟಿ ನೀಡಿದ್ದಾರೆ.

Advertisement

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು ರಾಮನಿಲ್ಲದೆ ಅಯೋಧ್ಯೆ ಅಯೋಧ್ಯೆಯೇ ಅಲ್ಲ. ರಾಮನು ಎಲ್ಲಿ ಇರುತ್ತಾನೆಯೋ ಅಲ್ಲಿಯೇ ಅಯೋಧ್ಯೆ ಇರುತ್ತದೆ.

ಇದನ್ನೂ ಓದಿ:ಪ್ಯಾರಾಲಿಂಪಿಕ್ಸ್‌|ಭಾರತಕ್ಕೆ ಮೂರನೇ ಪದಕ| ಡಿಸ್ಕಸ್ ಥ್ರೋನಲ್ಲಿ ಕಂಚು ಗೆದ್ದ ವಿನೋದ್

ಭಗವಾನ್‌ ಶ್ರೀರಾಮ ಈ ನಗರದಲ್ಲಿಯೇ ಶಾಶ್ವತವಾಗಿ ನೆಲೆಸಿರುವುದರಿಂದ ಈ ನಗರಕ್ಕೆ ಅಯೋಧ್ಯೆ ಎಂಬ ಹೆಸರು ಬಂದಿದೆ ಎಂದು ಹೇಳಿದ್ದಾರೆ.

ಇದಕ್ಕಿಂತಲೂ ಮೊದಲು ರಾಮಾಯಣಕ್ಕೆ ಸಂಬಂಧಿಸಿದ ಕಾರ್ಯಕ್ರಮವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಉದ್ಘಾಟಿಸಿದ್ದಾರೆ. ತಾತ್ಕಾಲಿಕ ದೇಗುಲದಲ್ಲಿ ರಾಮ ಲಲ್ಲಾನಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲು, ರಾಮ ಮಂದಿರದ ಸಣ್ಣ ಪ್ರತಿಕೃತಿಯನ್ನು ಅರ್ಚಕರು ರಾಷ್ಟ್ರಪತಿ ಕೋವಿಂದ್‌ ಅವರಿಗೆ ನೀಡಿ ಗೌರವಿಸಿದರು. ಜತೆಗೆ ಹನುಮಾನ್‌ ಗಾರ್ಹಿ ದೇಗುಲಕ್ಕೆ ಕೂಡ ರಾಷ್ಟ್ರಪತಿ ಭೇಟಿ ನೀಡಿದರು. ರಾಜ್ಯಪಾಲೆ ಆನಂದಿ ಬೆನ್‌ ಪಟೇಲ್‌, ಸಿಎಂ ಯೋಗಿ ಆದಿತ್ಯನಾಥ್‌ ಸೇರಿದಂತೆ ಪ್ರಮುಖರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next