Advertisement

ಕ್ಯಾನ್ಸರ್‌ಗೆ ತುತ್ತಾದ ರಾಷ್ಟ್ರೀಯ ಕರಾಟೆಪಟುವಿಗೆ ಚಿಕಿತ್ಸೆ ಸಂಕಟ

06:25 AM Dec 31, 2017 | Team Udayavani |

ಲುಧಿಯಾನ: ರಾಷ್ಟ್ರೀಯ ಕರಾಟೆ ಚಾಂಪಿಯನ್‌ ಆಗಿರುವ ಹುಡುಗಿಯೊಬ್ಬಳು ರಕ್ತ ಕ್ಯಾನ್ಸರ್‌ಗೆ ತುತ್ತಾಗಿ ಚಿಕಿತ್ಸೆಗೆ ಹಣವೂ ಇಲ್ಲದೆ ಈಗ ಪರದಾಟ ನಡೆಸುತ್ತಿರುವ ದುರಂತ ಕತೆಯಿದು.

Advertisement

ಹೆಸರು ಪ್ರಿಯಾಂಕಾ. ಪಂಜಾಬ್‌ನ ಲುಧಿಯಾನ ಮೂಲದವರು. ಕರಾಟೆ ಹಾಗೂ ಟೇಕ್ವಾಂಡೊದಲ್ಲಿ ಚಾಂಪಿಯನ್‌. ಟೇಕ್ವಾಂಡೊದಲ್ಲಿ 3 ಬಾರಿ ರಾಜ್ಯವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಒಂದು ಬಾರಿ ರಾಷ್ಟ್ರೀಯ ಕರಾಟೆಯಲ್ಲೂ ಚಿನ್ನದ ಪದಕ ಬಂದಿದೆ. ಆದರೆ ಈಗ ಪ್ರಿಯಾಂಕಾಗೆ ಈಗ ರಕ್ತದ ಕ್ಯಾನ್ಸರ್‌ ಕಾಡುತ್ತಿದೆ. ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ.

“ನಮ್ಮದು ಬಡ ಕುಟುಂಬ. 7 ಮಂದಿ ಸಹೋದರಿಯರಿದ್ದಾರೆ. ಅವರಲ್ಲಿ ನಾನು ಎರಡನೆಯವಳು. ನನ್ನ ತಾಯಿ ಕಾರ್ಖಾನೆಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಾರೆ. ತಂದೆಗೆ ವಿಪರೀತ ಕುಡಿತ ಚಟವಿದೆ. ಅವರು ದುಡಿಯುವುದಿಲ್ಲ. ತಾಯಿ ದುಡಿದ ಹಣವನ್ನು ಕುಡಿತಕ್ಕೆ ಖರ್ಚು ಮಾಡುತ್ತಾರೆ. ಏಳು ಮಂದಿ ಹೆಣ್ಣು ಮಕ್ಕಳನ್ನು ಸಾಕುವ ಹೊಣೆಯನ್ನು ತಾಯಿ ಹೊತ್ತಿದ್ದಾರೆ. ಜತೆಗೆ ಈಗ ನನ್ನ ಕ್ಯಾನ್ಸರ್‌ ಚಿಕಿತ್ಸೆಗೆ ಅವರೇ ಹಣ ಹೊಂದಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಬಿಲ್‌ ಕಟ್ಟಲು ನಮ್ಮ ಬಳಿಯಲ್ಲಿ ಹಣವಿಲ್ಲ’ ಎಂದು ಪ್ರಿಯಾಂಕಾ ನೊಂದು ನುಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next