Advertisement

ಬಸ್‌ಗೆ ಬ್ರ್ಯಾಂಡ್‌ ಸೂಚಿಸಿ ಬಹುಮಾನ ಗೆಲ್ಲಿ

12:34 AM Feb 08, 2019 | |

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ನೂತನ ‘ಅಂಬಾರಿ’ ಮಲ್ಟಿ ಆ್ಯಕ್ಸೆಲ್‌ ಸ್ಲೀಪರ್‌ ಬಸ್‌ ಸೇವೆ ಪರಿಚಯಿಸಲು ಉದ್ದೇಶಿಸಿದ್ದು, ಇದಕ್ಕೆ ಸೂಕ್ತ ಬ್ರ್ಯಾಂಡ್‌ ಹೆಸರು ಸೂಚಿಸುವಂತೆ ಸಾರ್ವಜನಿಕರಿಗೆ ಆಹ್ವಾನ ನೀಡಿದೆ. ಅಂಬಾರಿ ಹೆಸರನ್ನು ಉಳಿಸಿಕೊಂಡು, ಸಾರ್ವಜನಿಕರು ಫೆ. 20ರ ಒಳಗೆ ಹೊಸ ಬ್ರ್ಯಾಂಡ್‌ ಸೂಚಿಸಬೇಕು. ಆಯ್ಕೆಯಾಗುವ ಅತ್ಯುತ್ತಮ ಬ್ರ್ಯಾಂಡ್‌ ಪರಿಕಲ್ಪನೆಗೆ ಐದು ಸಾವಿರ ರೂ. ಬಹುಮಾನ ನೀಡಲಾಗುವುದು. ಬ್ರ್ಯಾಂಡ್‌ ಪರಿಕಲ್ಪನೆ ಮತ್ತು ಸಲಹೆಗಳನ್ನು ಕೆಎಸ್‌ಆರ್‌ಟಿಸಿಯ ಫೇಸ್‌ಬುಕ್‌ “Facebook/KSRTC.karnataka’ ಮೂಲಕ ಸಲ್ಲಿಸಬಹುದು ಎಂದು ನಿಗಮ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next