Advertisement

ಮಂದಿರಕ್ಕೆ ಜಾಗ ಕೊಡಲು ಸಿದ್ಧ

06:00 AM Jul 14, 2018 | |

ಲಕ್ನೋ: ಅಯೋಧ್ಯೆ ರಾಮಮಂದಿರ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಲು ಬದ್ಧವಾಗಿರುವ ಶಿಯಾ ವಕ್ಫ್ ಮಂಡಳಿಯು ಮಂದಿರ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡಲು ಸಿದ್ಧವಿದೆ ಎಂದಿದೆ. ಅಲಹಾಬಾದ್‌ ಹೈಕೋರ್ಟ್‌ ಈ ಹಿಂದೆ ತನ್ನ ತೀರ್ಪಿನಲ್ಲಿ ಮುಸ್ಲಿಮರಿಗೆ ನೀಡಿದ ಜಾಗದ  ಪೈಕಿ ಮೂರನೇ ಒಂದರಷ್ಟು ಪ್ರದೇಶವನ್ನು ನೀಡಲು ಸಿದ್ಧವಿದ್ದೇವೆ ಎಂದು ಮಂಡಳಿ ಹೇಳಿಕೆ ನೀಡಿದೆ.

Advertisement

ಬಾಬ್ರಿ ಮಸೀದಿಯು ಶಿಯಾ ವಕ್ಫ್ ಮಂಡಳಿಯ ಉಸ್ತುವಾರಿಯಲ್ಲಿದೆ. ಸುನ್ನಿ ವಕ್ಫ್ ಬೋರ್ಡ್‌ ಹಾಗೂ ಇತರರು ಭಾರತದ ಮುಸ್ಲಿಮರ ಪ್ರತಿನಿಧಿಗಳಲ್ಲ. ಅಯೋಧ್ಯೆಯಲ್ಲಿ ಆ ಪ್ರದೇಶದಲ್ಲಿ ಎಂದಿಗೂ ಮಸೀದಿ ಇರಲಿಲ್ಲ ಹಾಗೂ ಅಲ್ಲಿ ಮಸೀದಿ ನಿರ್ಮಾಣವನ್ನೂ ಮಾಡುವುದಿಲ್ಲ. ಅದು ರಾಮನ ಜನ್ಮಸ್ಥಳ ಮತ್ತು ರಾಮನ ದೇಗುಲ ಮಾತ್ರ ಅಲ್ಲಿ ನಿರ್ಮಾಣವಾಗುತ್ತದೆ ಎಂದು ಶಿಯಾ ಮಂಡಳಿ ಮುಖ್ಯಸ್ಥ ವಸೀಮ್‌ ರಿಜ್ವಿ ಹೇಳಿದ್ದಾರೆ.

ಇನ್ನೊಂದೆಡೆ ಶಿಯಾ ಮಂಡಳಿ ಈ ವಿಚಾರದಲ್ಲಿ ಮಾತನಾಡುವ ಯಾವ ಅಧಿಕಾರವನ್ನೂ ಹೊಂದಿಲ್ಲ ಎಂದು ಹಿರಿಯ ವಕೀಲ ರಾಜೀವ್‌ ಧವನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next