Advertisement

ತಮಿಳು ನಾಡು ಸರಕಾರವನ್ನು ಉರುಳಿಸಿಯೇ ಸಿದ್ಧ : ದಿನಕರನ್‌

06:48 PM Sep 12, 2017 | udayavani editorial |

ಚೆನ್ನೈ : ”ಕೆ ಪಳನಿಸ್ವಾಮಿ ನೇತೃತ್ವದ ತಮಿಳು ನಾಡು ಸರಕಾರವನ್ನು ಉರುಳಿಸಿಯೇ ಸಿದ್ಧ” ಎಂದು  ಉಚ್ಚಾಟಿತ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ  ಟಿ ಟಿ ವಿ ದಿನಕರನ್‌ ಪಣ ತೊಟ್ಟಿದ್ದಾರೆ. 

Advertisement

ಆಳುವ ಎಐಎಡಿಎಂಕೆ ಮಹಾ ಮಂಡಳಿ ತನ್ನನ್ನು ಹಾಗೂ ತನ್ನ ಚಿಕ್ಕಮ್ಮ ವಿ ಕೆ ಶಶಿಕಲಾ ರನ್ನು ಪಕ್ಷದ ಉನ್ನತ ಹುದ್ದೆಯಿಂದ ಕಿತ್ತು ಹಾಕಿದುದನ್ನು ಅನುಸರಿಸಿ ದಿನಕರನ್‌ ಈ ಪ್ರತಿಜ್ಞೆ ಮಾಡಿದ್ದಾರೆ.

ತಾಜಾ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸುತ್ತಾ ಟಿ ಟಿ ವಿ ದಿನಕರನ್‌ “ಹೆಚ್ಚಿನ ಸಚಿವರು ತಾವು ಚುನಾವಣೆಯಲ್ಲಿ ಸೋತೇವೆಂಬ ಭೀತಿ ಹೊಂದಿದ್ದಾರೆ; ಆದುದರಿಂದಲೇ ನಾವು ಡಿಎಂಕೆ ಜತೆ ಕೈಜೋಡಿಸಿದ್ದೇವೆ ಎಂದು ಅವರು ಆರೋಪಿಸುತ್ತಿದ್ದಾರೆ’ ಎಂದು ಹೇಳಿದರು. 

ನನ್ನ ಎದುರಾಳಿಗಳು ತಮಗೆ ಜನಬೆಂಬಲ ಇದೆ ಎಂದು ಭಾವಿಸುವುದಾದರೆ ಅವರು ಹೊಸ ಚುನಾವಣೆಗಳನ್ನು ನಡೆಸಿ ಸ್ಪರ್ಧೆಗಿಳಿಯಬೇಕು ಎಂದು ದಿನಕರನ್‌ ಸವಾಲೆಸೆದರು. 

Advertisement

Udayavani is now on Telegram. Click here to join our channel and stay updated with the latest news.

Next