Advertisement

ಹೆಂಡತಿ ನೋಡಿಕೊಳ್ಳಲು ಸಾಧ್ಯವಾಗದವರಿಂದ ಮತ್ತೂಬ್ಬರ ಬಗ್ಗೆ ಸೀಡಿ

08:41 AM Nov 18, 2017 | Team Udayavani |

ತಮ್ಮ ವಿರುದ್ಧ ಅಶ್ಲೀಲ ಭಂಗಿಯ ಸೀಡಿಗಳು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಟೇಲ್‌ ಮೀಸಲು ಹೋರಾಟಗಾರ ಹಾರ್ದಿಕ್‌ ಪಟೇಲ್‌ ನೇರವಾಗಿ ಪ್ರಧಾನಿ ಮೋದಿ ವಿರುದ್ಧವೇ ಟೀಕೆ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಪದ್ಯದ ರೀತಿಯಲ್ಲಿ ಟೀಕೆ ಮಾಡಿರುವ ಅವರು “ಶ್ರೀರಾಮನು ಸೀತೆಗೆ ಹೇಳುತ್ತಾನೆ: ಎಂಥಾ ಕಲಿಯುಗ ಬರುತ್ತದೆಂದರೆ, ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳಲಾಗದವರು ಮತ್ತೂಬ್ಬರ ಬಗ್ಗೆ ಸೀಡಿ ಮಾಡುತ್ತಾರೆ. ರಾಮನ ಮೂರ್ತಿ ಟೆಂಟ್‌ನಲ್ಲಿದ್ದರೆ, ಮಹಾತ್ಮಾ ಗಾಂಧಿಯನ್ನು ಕೊಂದ ನಾಥೂರಾಮ್‌ ಗೋಡ್ಸೆಗೆ ದೇಗುಲ ನಿರ್ಮಿಸುತ್ತಾರೆ. ಒಬ್ಬ ಬ್ರಿಟೀಷನನ್ನು ಕೊಲ್ಲಲು ಸಾಧ್ಯವಾಗದವರು ಮಹಾತ್ಮನನ್ನು ಕೊಲ್ಲುತ್ತಾರೆ. ದಲಿತರನ್ನು ತುಳಿಯುವುದರ ಜತೆಗೆ ಹಿಂದೂ – ಮುಸ್ಲಿಮರ ನಡುವೆ ಕಂದಕ ಸೃಷ್ಟಿಸುತ್ತಾರೆ. ಗೋವನ್ನು ತಾಯಿ ಎನ್ನುತ್ತಲೇ ಅದರ ಮಾಂಸವನ್ನು ಮಾರಾಟ ಮಾಡುತ್ತಾರೆ’ ಎಂದು ಬರೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next