Advertisement

ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಲು ನಿತೀಶ್ ಅವರಿಗೆ ಬೆಂಬಲ: ತೇಜ್ ಪ್ರತಾಪ್

04:18 PM Aug 28, 2022 | Team Udayavani |

ಪಾಟ್ನಾ : ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ದೇಶದ ಪ್ರಧಾನಿಯಾಗಲು ತೇಜ್ ಪ್ರತಾಪ್ ಯಾದವ್ ಅವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

Advertisement

ಎಎನ್ಐಗೆ ಹೇಳಿಕೆ ನೀಡಿರುವ ತೇಜ್ ಪ್ರತಾಪ್ ಯಾದವ್, ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರವಾಗಿದೆ. ಲಾಲು ಪ್ರಸಾದ್ ಯಾದವ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ ನಿತೀಶ್ ಕುಮಾರ್ ಅವರನ್ನು ತಮ್ಮ ಚಿಕ್ಕಪ್ಪ ಎಂದು ಪರಿಗಣಿಸುವುದಾಗಿ ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ. ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಲು ನಿತೀಶ್ ಕುಮಾರ್‌ ಅವರಿಗೆ ಆರ್‌ಜೆಡಿ ಬೆಂಬಲ ನೀಡಲಿದೆ ಎಂದರು.

ಇದಕ್ಕೂ ಮುನ್ನ, ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಪರಿಗಣಿಸಿದರೆ, ನಿತೀಶ್ ಕುಮಾರ್ ಅವರು “ಪ್ರಬಲ ಅಭ್ಯರ್ಥಿ” ಎಂದು ಹೇಳಿದ್ದರು.

ಪ್ರಧಾನಿ ಹುದ್ದೆಗೆ ಸ್ಪರ್ಧಿಸಲು ನಿತೀಶ್ ಕುಮಾರ್ ಅವರಿಗೆ ಬೆಂಬಲ ದೊರೆತಿದ್ದರೂ, ಅವರು ಅಂತಹ ಮಹತ್ವಾಕಾಂಕ್ಷೆಯನ್ನು ನಾನು ಹೊಂದಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next