Advertisement

ತಮಿಳು ನಾಡಿನ 3 ಖಾಲಿ ವಿಧಾನಸಭಾ ಕ್ಷೇತ್ರಗಳಿಗೆ ಬೇಗನೆ ಉಪ ಚುನಾವಣೆ

09:07 AM Mar 29, 2019 | Sathish malya |

ಹೊಸದಿಲ್ಲಿ : ಖಾಲಿ ಬಿದ್ದಿರುವ ತಮಿಳುನಾಡಿನ ತಿರುಪರಣಕುಂದ್ರಂ, ಒತ್ತಾಪಿದಾರಂ ಮತ್ತು ಅರವಕುರುಚ್ಚಿ ವಿಧಾನಸಭಾ ಸ್ಥಾನಗಳಿಗೆ ತಾನು ನ್ಯಾಯೋಚಿತ ಕಾಲಮಿತಿಯೊಳಗೆ ಉಪ ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಇಂದು ಸುಪ್ರೀಂ ಕೋರ್ಟಿಗೆ ತಿಳಿಸಿದೆ.

Advertisement

ಖಾಲಿ ಬಿದ್ದಿರುವ ತಮಿಳು ನಾಡಿನ ಈ ಮೂರು ಸೀಟುಗಳಿಗೆ ಆದಷ್ಟು ಬೇಗನೆ ಉಪ ಚುನಾವಣೆ ನಡೆಸವಂತೆ ಚುನಾವಣಾ ಆಯೋಗಕ್ಕೆ ಸೂಕ್ತ ನಿರ್ದೇಶ ನೀಡಬೇಕೆಂದು ಕೋರಿ ಡಿಎಂಕೆ ಸಲ್ಲಿಸಿದ ಅರ್ಜಿಯ ವಿಚಾರಣೆ ಇಂದು ಜಸ್ಟಿಸ್‌ ಎಸ್‌ ಎ ಬೋಬಡೆ ಮತ್ತು ಎಸ್‌ ಎ ನಜೀರ್‌ ಅವರನ್ನು ಒಳಗೊಂಡ ಸುಪ್ರೀಂ ಪೀಠದ ಮುಂದೆ ಬಂದಾಗ ಚುನಾವಣಾ ಆಯೋಗವನ್ನು ಪ್ರತಿನಿಧಿಸಿ ಹಾಜರಿದ್ದ ವಕೀಲರು, ನ್ಯಾಯೋಚಿತ ಕಾಲಮಿತಿಯೊಳಗೆ ಉಪ ಚುನಾವಣೆ ನಡೆಸಲಾಗುವುದು ಎಂದು ಕೋರ್ಟಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next