Advertisement

ಬಿಜೆಪಿಯಿಂದ ದೊಡ್ಡನಗೌಡ ಪಾಟೀಲ್ ಗೆಲ್ಲುತ್ತಾರೋ?; ಹನುಮಂತ ಕೊಟ್ಟ ಪ್ರಸಾದ!

07:53 PM Dec 24, 2022 | Team Udayavani |

ದೋಟಿಹಾಳ : ವಿಧಾನಸಭೆ ಚುನಾವಣೆಗೆ ಇನ್ನೂ 4-5 ತಿಂಗಳು ಇರುವಾಗಲೇ ಬೆಂಬಲಿಗರ ಉತ್ಸಾಹ ಎಷ್ಟರಮಟ್ಟಿಗೆ ಕಾಣುತ್ತಿದೆ ಎಂದರೆ ಈ ಬಾರಿ ನಮ್ಮ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲುತ್ತಾರೋ ಇಲ್ಲವೋ ಎಂಬುದನ್ನುತಿಳಿಯಲು ದೇವರ ಮರೆ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ಇತ್ತೀಚಿಗೆ ತಾಲೂಕಿನ ಗ್ರಾಮವೊಂದರಲ್ಲಿ ಹನುಮಂತ ದೇವರ ಗುಡಿಯಲ್ಲಿ ಕುಷ್ಟಗಿ ಮಾಜಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ್ ಅವರ ಅಭಿಮಾನಿಗಳು 2023ರಲ್ಲಿ ನಡೆಯುವ ಚುನಾವಣೆಯಲ್ಲಿ ಕುಷ್ಟಗಿ ಕ್ಷೇತ್ರದಲ್ಲಿ ಜಯಶಾಲಿ ಆಗುತ್ತಾರೋ ಇಲ್ಲವೋ ಎಂಬುದನ್ನು ತಿಳಿಯಲು ಹನುಮಂತ ದೇವರ ಮೊರೆ ಹೋಗಿದ್ದಾರೆ.

ಹನುಮಂತ ದೇವರಿಗೆ ಪತ್ರೆಗಳಿಂದ ಸಿಂಗಾರ ಮಾಡಿ,  ಗೆಲ್ಲುತ್ತಾರೆ ಎಂದರೆ ನಿನ್ನ ಮೇಲೆ ಇರುವ ಪತ್ರೆಗಳನ್ನು ಬಲಭಾಗದಿಂದ ಬೀಳಿಸಿ ಫಲ ನೀಡಬೇಕೆಂದು ಪ್ರಾರ್ಥಿಸಿಕೊಂಡಿದ್ದಾರೆ. ಈ ವೇಳೆ ಹನುಮಂತ ವಿಗ್ರಹದ ಬಲಭಾಗದಲ್ಲಿರುವ ಪತ್ರೆಗಳು ಕೆಳಗೆ ಬೀಳುವ ಮೂಲಕ ಭಕ್ತರ ಪ್ರಶ್ನೆಗೆ ಉತ್ತರ ನೀಡಿದ್ದು , ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next