Advertisement

ಸಕಲೇಶಪುರ: ಮೊಬೈಲ್‌ ಒಡೆದು ಹಾಕಿದ ಕಾಡಾನೆ ; ವಿಡಿಯೋ ವೈರಲ್

04:41 PM Jun 11, 2022 | Team Udayavani |

ಸಕಲೇಶಪುರ: ಕಾಡಾನೆ ಚಲನವಲನ ನೋಡಲು ಕಾಫಿ ತೋಟವೊಂದರಲ್ಲಿ ಇಟ್ಟಿದ್ದ ಮೊಬೈಲ್‌ವೊಂದನ್ನು ಕಾಡಾನೆಯೊಂದು ಒಡೆದು ಹಾಕಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

ತಾಲೂಕಿನ ಹಾಲೇಬೇಲೂರು ಗ್ರಾಮದ ಕಾಫಿ ತೋಟವೊಂದರಲ್ಲಿ ಕಾಡಾನೆಗಳ ಚಲನವಲನ ತಿಳಿಯಲು ವ್ಯಕ್ತಿಯೋರ್ವ ರು ಮೊಬೈಲ್‌ ಒಂದನ್ನು ಇಟ್ಟಿದ್ದು , ಈ ವೇಳೆ ಮೊಬೈಲ್‌ನ್ನು ನೋಡಿದ ಕಾಡಾನೆ ಮೊಬೈಲ್‌ ಹತ್ತಿರ ಬಂದು ಒಡೆದು ಹಾಕಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು ಕಾಡಾನೆಗಳಿಂದ ಜೀವ ಹಾನಿ, ಬೆಳೆ ಹಾನಿಯನ್ನು ತಡೆಗಟ್ಟಲು ಜನ ನಾನಾ ರೀತಿಯ ಉಪಾಯಗಳನ್ನು ಮಾಡಿದರು ಸಹ ಕಾ ಡಾನೆಗಳು ಸಹ ಜನರ ಉಪಾಯಗಳನ್ನು ಭೇದಿಸಿ ಎಲ್ಲಿ ಬೇಕೆಂ ದರಲ್ಲಿ ಸಂಚರಿಸುತ್ತಿವೆ. ಜನಸಾಮಾನ್ಯರಲ್ಲಿ ಭೀತಿ ಹುಟ್ಟುಹಾಕಿದೆ. ಸರ್ಕಾರ ಕೂಡಲೆ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡು ಕದಿದ್ದಲ್ಲಿ, ಮುಂದಿನ ದಿನಗಳಲ್ಲಿ ವ್ಯಾಪಕ ಅನಾಹುತಗಳು ಉಂಟಾಗುವುದರಲ್ಲಿ ಅನುಮಾನವಿಲ್ಲದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next