Advertisement

Dharmasthala ಬೋಳಿಯಾರ್‌ನಲ್ಲಿ ಕಾಡಾನೆ ದಾಳಿ

08:48 PM Aug 06, 2024 | Team Udayavani |

ಬೆಳ್ತಂಗಡಿ: ಧರ್ಮಸ್ಥಳ ಸಮೀಪದ ಬೋಳಿಯಾರು ಪ್ರದೇಶದಲ್ಲಿ ನಿತ್ಯನಿರಂತರ ಎಂಬಂತೆ ಕಳೆದ ಹಲವು ದಿನಗಳಿಂದ ಕಾಡಾನೆ ದಾಳಿ ನಡೆಸುತ್ತಿರುವ ಘಟನೆ ಮಂಗಳವಾರ (ಆ.6) ಬೆಳಕಿಗೆ ಬಂದಿದೆ.
ಇತ್ತೀಚೆಗೆ ಮುಖ್ಯ ರಸ್ತೆಯಲ್ಲೇ ಕಾಣಿಸಿಕೊಂಡಿದ್ದ ಆನೆಗಳು, ಸಂಜೆಯಾಗುತ್ತಿದ್ದಂತೆ ಸಮೀಪದಲ್ಲಿ ಬೆಳೆದಿರುವ ಅಡಿಕೆ, ತೆಂಗು, ಬಾಳೆಗಿಡಗಳನ್ನು ಧ್ವಂಸ ಮಾಡುತ್ತಿದೆ. ಆನೆಯ ಹಾವಳಿಯಿಂದಾಗಿ ತರಕಾರಿ, ಮರಗೆಣಸು ಮುಂತಾದ ಬೆಳೆಗಳೆಲ್ಲಾ ನಾಶವಾಗಿದ್ದು, ರಾತ್ರಿ ಮನೆಯಿಂದ ಹೊರ ಹೋಗದಂತಾಗಿದೆ ಎಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ. ಸಂಬಂದಪಟ್ಟ ಅರಣ್ಯ ಇಲಾಖೆಯು ಗರ್ನಲ್‌ ನೀಡಿದರು ನಿರಂತರ ಕಾಡಾನೆ ದಾಳಿಯಿಂದ ಇಲ್ಲಿನ ಕೃಷಿಕರು ರೋಸಿಹೋಗಿದ್ದಾರೆ ಎಂದು  ಸ್ಥಳಿಯರು ತಿಳಿಸಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next