Advertisement

ಎತ್ತಿನಭುಜದ ಬಳಿ ಕಾಡಾನೆಗಳ ಹಿಂಡು : ಕಾಡು ಪ್ರಾಣಿಗಳ ಹಾವಳಿಗೆ ಬೆಚ್ಚಿದ ಗ್ರಾಮಸ್ಥರು

01:37 PM Oct 27, 2021 | Team Udayavani |

ಮೂಡಿಗೆರೆ : ತಾಲೂಕಿನ ಬೈರಾಪುರ ಸಮೀಪದ ಚಾರಣಿಗರ ನೆಚ್ಚಿನ ತಾಣವಾದ ಎತ್ತಿನಭುಜ ಸಮೀಪ ಕಾಡಾನೆಗಳ ಹಿಂಡು ಕಂಡುಬಂದಿದೆ.

Advertisement

ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಕಾಟ ಮಿತಿಮೀರಿದ್ದು ಮೂಡಿಗೆರೆ ತಾಲೂಕಿನ ಬೈರಾಪುರ ಸಮೀಪದ ಎತ್ತಿನಬುಜ ಎಂಬಲ್ಲಿ ಹಾಡುಹಗಲೇ ಆನೆಗಳ ಹಿಂಡು ಕಾಣಿಸಿಕೊಂಡಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ

ಮಲೆನಾಡಿನಲ್ಲಿ ರೈತರು ಅಕಾಲಿಕ ಮಳೆಗೆ ತತ್ತರಿಸಿ ಹೋಗಿದ್ದು ಇನ್ನೊಂದೆಡೆ ಕಾಡುಪ್ರಾಣಿಗಳ ಕಾಟ ಮಿತಿಮೀರಿದ್ದು ಕಾಡುಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ದಿನದಿಂದ ದಿನಕ್ಕೆ ಕಾಡುಪ್ರಾಣಿಗಳ ಕಾಟ ಮಿತಿಮೀರಿದ್ದು ಅದರಲ್ಲೂ ಆನೆಗಳ ಹಿಂಡು ಬೈರಾಪುರ ಮೂಲರಹಳ್ಳಿ ಗುತ್ತಿ ಕೋಗಿಲೆ ಮೊದಲಾದವುಗಳಲ್ಲಿ ರಾತ್ರಿ-ಹಗಲೆನ್ನದೆ ನಿರಂತರ ದಾಳಿ ನಡೆಸಿದ್ದು ಆನೆಗಳನ್ನು ಸ್ಥಳಾಂತರ ಮಾಡ ಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಬಳುವನೇರಲು ಗೇಟ್ ಬಳಿ ಭೀಕರ ಅಪಘಾತ : ಬೈಕ್ ಸವಾರರು ಸ್ಥಳದಲ್ಲೇ ಸಾವು ;ಗ್ರಾಮಸ್ಥರ ಪ್ರತಿಭಟನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next