Advertisement

ಪತ್ನಿಯ ಹತ್ಯೆ, ಪತಿ ಅಪರಾಧಿ: ಕೋರ್ಟ್‌

12:17 AM Jun 16, 2023 | Team Udayavani |

ಮಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಪತ್ನಿಯ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣನಾದ ಪತಿಯನ್ನು ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿ ಎಂದು ಪರಿಗಣಿಸಿ ತೀರ್ಪು ನೀಡಿದೆ. ಪ್ರಕರಣದ ಶಿಕ್ಷೆಯ ಪ್ರಮಾಣವನ್ನು ಜೂ. 16ರಂದು ಪ್ರಕಟಿಸಲಿದೆ.

Advertisement

ಧರ್ಮಸ್ಥಳ ಸಮೀಪದ ನೆರಿಯ ಗ್ರಾಮದ ನೆರಿಯಕಾಡು ಕೊಟ್ಟಕ್ಕರ ನಿವಾಸಿ ಮ್ಯಾಥು ಅವರ ಪುತ್ರ ತೋಟದ ಕೆಲಸ ಮಾಡಿಕೊಂಡಿದ್ದ ಜಾನ್ಸನ್‌ ಕೆ.ಎಂ. (41) ಪತ್ನಿಯ ಹತ್ಯೆ ನಡೆಸಿದ ಅಪರಾಧಿ. ಈತ ತನ್ನ ಪತ್ನಿ 36 ವರ್ಷ ಪ್ರಾಯದ ಸೌಮ್ಯಾ ಫ್ರಾನ್ಸಿಸ್‌ ಅವರೊಂದಿಗೆ ಜ. 7ರ 2021ರಂದು ರಾತ್ರಿ 7.30ರಿಂದ 8.30ರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿ ಆಕೆಯ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದ. ಇದರಿಂದ ಅವರು ಮೃತರಾಗಿದ್ದರು.

ಈ ಕುರಿತು ಸೌಮ್ಯ ಅವರ ಸೋದರ ಸನೋಜ್‌ ಫ್ರಾನ್ಸಿಸ್‌ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದರು. ತನ್ನ ಸೋದರಿಗೆ ಮಾನಸಿಕ ದೈಹಿಕ ಹಿಂಸೆ ನೀಡಲಾಗುತ್ತಿತ್ತು, ಅಲ್ಲದೆ ಒಮ್ಮೆ ಚರ್ಚ್‌ನಲ್ಲೂ ಮಾತುಕತೆ ನಡೆಸಿದ್ದು, ಅದರ ಬಳಿಕವೂ ಹಿಂಸೆ ಮುಂದುವರಿದಿದ್ದ ಬಗ್ಗೆ ದೂರಿನಲ್ಲಿ ತಿಳಿಸಲಾಗಿತ್ತು. ಐಪಿಸಿ 498(ಎ) ಹಾಗೂ 302ರನ್ವಯ ಪ್ರಕರಣ ದಾಖಲಿಸಲ್ಪಟ್ಟಿತ್ತು. ಇದರ ವಿಚಾರಣೆ ಪೂರ್ಣಗೊಂಡಿದ್ದು, ಶುಕ್ರವಾರ ತೀರ್ಪು ಪ್ರಕಟವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next