Advertisement

ಅನೈತಿಕ ಸಂಬಂಧಕ್ಕೆ ಒಪ್ಪದ ಪತಿಯ ಕೊಂದಿದ್ದ ಪತ್ನಿ!

12:37 PM May 30, 2017 | Team Udayavani |

ಬೆಂಗಳೂರು: ಯಶವಂತಪುರದ ಸುಬೇದಾರ್‌ ಪಾಳ್ಯದಲ್ಲಿ ಇತ್ತೀಚೆಗೆ ಹತ್ಯೆಯಾಗಿದ್ದ ಭದ್ರತಾ ಮೇಲ್ವಿಚಾರಕ ಸತೀಶ್‌ ಎಂಬಾತನ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶವಂತಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಪ್ರಕರಣ ಸಂಬಂಧ ನಟ ಜಾವಿದ್‌ ಮತ್ತು ಮೃತ ಸತೀಶ್‌ ಪತ್ನಿ ಕಲ್ಪನಾಳನ್ನು ಪೊಲೀಸರು ಬಂಧಿಸಿದ್ದಾರೆ. ಜಾವಿದ್‌ ಮತ್ತು ಕಲ್ಪನಾ ಅನೈತಿಕ ಸಂಬಂಧ ಹೊಂದಿದ್ದರು. ಇದನ್ನು ಪತಿ ಸತೀಶ್‌ ಪ್ರಶ್ನಿಸಿ ಪತ್ನಿ ಜತೆ ಒಂದೆರಡು ಬಾರಿ ಜಗಳವಾಡಿದ್ದ. ಇದರಿಂದ ಆಕ್ರಗೋಶಗೊಂಡಿದ್ದ ಆರೋಪಿಗಳು ಸತೀಶ್‌ನನ್ನು ಕೊಲೆಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತುಮಕೂರು ಮೂಲದ ಸತೀಶ್‌ ಮತ್ತು ಕಲ್ಪನಾ 13 ವರ್ಷಗಳ ಹಿಂದೆ ಮದುವೆಯಾಗಿದ್ದು, 12 ವರ್ಷದ ಹೆಣ್ಣು ಮಗು ಮತ್ತು ಒಂದೂವರೆ ವರ್ಷದ ಗಂಡು ಮಗು ಇದೆ. ಕಳೆದೊಂದು ವರ್ಷದಿಂದ ಸುಬೇದಾರ್‌ ಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ದಂಪತಿ ಎರಡು ಪ್ರತ್ಯೇಕ ಭದ್ರತಾ ಏಜೆನ್ಸಿಗಳಲ್ಲಿ ಕೆಲಸ ಮಾಡುತ್ತಿದ್ದರು. ಸತೀಶ್‌ ಭದ್ರತಾ ಮೇಲ್ವಿಚಾರಕನಾಗಿದ್ದು, ಪತ್ನಿ ಕಲ್ಪನಾ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.

ಪ್ಯಾಂಟ್‌ ಬಳಸಿ ಕೊಲೆ: ಈ ಮಧ್ಯೆ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ನಟ (ಚೌಕ ಸಿನಿಮಾದಲ್ಲಿ ನಟನೆ) ಜಾವಿದ್‌ನ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಒಂದು ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದರು. ವಿಷಯ ತಿಳಿದ ಸತೀಶ್‌, ಪತ್ನಿ ಕಲ್ಪನಾಳ ಜತೆ ಜಗಳವಾಡಿದ್ದ. ಇದರಿಂದ ಆಕ್ರೋಶಗೊಂಡಿದ್ದ ಕಲ್ಪನಾ, ಪ್ರೀಯಕರನ ಸೂಚನೆಯಂತೆ ಮೇ 22ರಂದು ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ಬಂದ ಸತೀಶ್‌ಗೆ ಊಟದಲ್ಲಿ ನಿದ್ದೆ ಮಾತ್ರೆ ಹಾಕಿದ್ದಳು.

ನಂತರ ತಡರಾತ್ರಿ 2 ಗಂಟೆ ಸುಮಾರಿಗೆ ಮನೆಗೆ ಬಂದ ಜಾವಿದ್‌ ಕಲ್ಪನಾಳ ಚೂಡಿದಾರದ ಪ್ಯಾಂಟ್‌ನಿಂದ ಕತ್ತು ಬಿಗಿದು ಕೊಲೆ ಮಾಡಿ, ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೇ 23ರಂದು ಬೆಳಗ್ಗೆ ಸತೀಶ್‌ನ ಚಿಕ್ಕಪ್ಪನಿಗೆ ಕರೆ ಮಾಡಿದ ಕಲ್ಪನಾ ಸತೀಶ್‌ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ಹೇಳಿದ್ದಾರೆ.

Advertisement

ಕೂಡಲೇ ಆಸ್ಪತ್ರೆಗೆ ಬಂದ ಚಿಕ್ಕಪ್ಪ ಸತೀಶ್‌ ಕುತ್ತಿಗೆ ಭಾಗದಲ್ಲಿ ಕೈಗಳಿಂದ ಒತ್ತಿರುವ ಗುರುತುಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ನಂತರ ಅನುಮಾನ ವ್ಯಕ್ತಪಡಿಸಿ ಠಾಣೆಗೆ ದೂರು ನೀಡಿದ್ದರು. ಆರೋಪಿಗಳ ಕಾಲ್‌ ಡಿಟೇಲ್ಸ್‌ ಮತ್ತು  ಅಪಾರ್ಟ್‌ಮೆಂಟ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next