Advertisement

Uttar Pradesh ಸೊಸೆಯನ್ನು ರಕ್ಷಿಸಲು ಪತಿಯನ್ನೇ ಕೊಂದಳು!

09:03 PM Aug 26, 2023 | Team Udayavani |

ಲಕ್ನೋ: ತಮ್ಮ ಸೊಸೆಯನ್ನು ಲೈಂಗಿಕ ಕಿರುಕುಳದಿಂದ ರಕ್ಷಿಸುವ ಸಲುವಾಗಿ ಮಹಿಳೆಯೊಬ್ಬರು ತನ್ನ ಪತಿಯನ್ನೇ ಕೊಂದಿರುವ ಘಟನೆ ಉತ್ತರಪ್ರದೇಶದ ಬದೌನ್‌ನಲ್ಲಿ ನಡೆದಿದೆ.

Advertisement

ಮೃತ ವ್ಯಕ್ತಿಯನ್ನು ಆಟಿಕೆ ತಯಾರಿಕೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ತೇಜೇಂದ್ರ ಸಿಂಗ್‌(43) ಎಂದು ಗುರುತಿಸಲಾಗಿದೆ. ಈತನನ್ನು ಕೊಲೆಗೈದಿದ್ದು ಪತ್ನಿ ಮಿಥ್ಲೇಶ್ ದೇವಿ(40). ತೇಜೇಂದ್ರ-ದೇವಿ ದಂಪತಿಗೆ ನಾಲ್ವರು ಮಕ್ಕಳಿದ್ದರು. ಈ ಪೈಕಿ ಒಬ್ಟಾತನಿಗೆ ವಿವಾಹವಾಗಿತ್ತು.

“ಪ್ರತಿ ದಿನ ಮದ್ಯ ಸೇವನೆ ಮಾಡಿ ಮನೆಗೆ ಬರುತ್ತಿದ್ದ ಪತಿ, ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದ ಮಾತ್ರವಲ್ಲ, ಸೊಸೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಲು ಹಾತೊರೆಯುತ್ತಿದ್ದ. ಸೊಸೆಯನ್ನು ಇದಕ್ಕೆ ಒಪ್ಪಿಸುವಂತೆ ನನ್ನ ಮೇಲೆ ಒತ್ತಡ ತರುತ್ತಿದ್ದ. 19 ವರ್ಷದ ಸೊಸೆಯನ್ನು ಈತನ ಕಾಮದ ತೃಷೆಯಿಂದ ರಕ್ಷಿಸಬೇಕೆಂದು ನಿರ್ಧರಿಸಿದ್ದೆ. ಅದರಂತೆ, ಆ.14ರಂದು ಕುಡಿದು ಬಂದು ಮಲಗಿದ್ದ ಪತಿಯ ಕತ್ತು ಸೀಳಿ ಕೊಲೆಗೈದೆ’ ಎಂದು ಮಿಥ್ಲೇಶ್ ದೇವಿ ತಪ್ಪೊಪ್ಪಿಕೊಂಡಿದ್ದಾರೆ. ಪ್ರಕರಣ ಸಂಬಂಧ ಮಿಥ್ಲೆàಶ್‌ ದೇವಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next