Advertisement

ಗಂಡನನ್ನು ಕೊಂದ ಮಾಹಿತಿ Facebookನಲ್ಲಿ ಹಂಚಿ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ ಪತ್ನಿ

04:25 PM Jan 04, 2021 | Team Udayavani |

ನವದೆಹಲಿ : ತನ್ನ ಗಂಡನನ್ನು ಚೂರಿಯಿಂದ ಇರಿದು ಕೊಂದು, ಬಳಿಕ ತಾನು ಕೊಂದಿರುವ ಮಾಹಿತಿಯನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಕ್ಷಿಣ ದೆಹಲಿಯ ಛತ್ತರ್ ಪುರದಲ್ಲಿರುವ ವಸತಿ ಸಮ್ಮುಚ್ಛಯದಲ್ಲಿ ಶನಿವಾರ ನಡೆದಿದೆ.

Advertisement

ಘಟನೆಯ ವಿವರ : ದಕ್ಷಿಣ ದೆಹಲಿಯ ಛತ್ತರ್ ಪುರದಲ್ಲಿರುವ ವಸತಿ ಸಮುಚ್ಛಯದಲ್ಲಿರುವ ಗಂಡ ಹೆಂಡತಿ ವಾಸಿಸುತ್ತಿದ್ದರು, ಶನಿವಾರ ಅವರಿಬ್ಬರ ನಡುವೆ ಅದೇನು ನಡೆಯಿತೋ ಗೊತ್ತಿಲ್ಲ ಹೆಂಡತಿ ತನ್ನ ಗಂಡನನ್ನು ಚೂರಿಯಿಂದ ಇರಿದು ಕೊಂದಿದ್ದಾಳೆ, ಅಷ್ಟೇ ಅಲ್ಲ ಕೊಂದ ವಿಚಾರವನ್ನು ತನ್ನ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾಳೆ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಮಹಿಳೆ ತನ್ನ ಫೇಸ್ ಬುಕ್ ನಲ್ಲಿ ತಾನು ಕೊಂದಿರುವ ಮಾಹಿತಿಯನ್ನು ಅದೇ ಪ್ರದೇಶದ ಮಹಿಳೆಯೊಬ್ಬರು ಗಮನಿಸಿದ್ದಾರೆ, ಫೇಸ್ ಬುಕ್ ನಲ್ಲಿ ಹಾಕಿರುವ ಮಾಹಿತಿಯನ್ನು ಮನಗಂಡ ಮಹಿಳೆ ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.

ಇದನ್ನೂ ಓದಿ: ಕೇಂದ್ರದ ಶಿಸ್ತು ಸಮಿತಿಗೆ ಯತ್ನಾಳ್ ವಿಚಾರದಲ್ಲಿ ಮಾಹಿತಿ ನೀಡಿದ್ದೇವೆ: ನಳಿನ್ ಕುಮಾರ್ ಕಟೀಲ್

ಮಾಹಿತಿ ಅರಿತು ಘಟನಾ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ತೆರೆಯುವ ಪ್ರಯತ್ನ ಮಾಡಿದ್ದಾರೆ ಆದರೆ ಒಳಗಿನಿಂದ ಯಾವುದೇ ಪ್ರತಿಕ್ರೀಯೆ ಬರದಿದ್ದಾಗ ಪೊಲೀಸರು ಬಾಗಿಲನ್ನು ಒಡೆದು ಒಳ ಪ್ರವೇಶಿಸಿದ್ದಾರೆ, ಕೊಠಡಿಯ ಒಳಗೆ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಅದರ ಪಕ್ಕದಲ್ಲೇ ಇರುವ ಬೆಡ್ ಮೇಲೆ ಮಹಿಳೆ ಅರೆಪ್ರಜ್ಞಾವಸ್ಥೆಯಲ್ಲಿರುವುದು ಗಮನಗಕ್ಕೆ ಬಂದಿದೆ.

Advertisement

ಕೂಡಲೇ ಪೊಲೀಸರು ಮಹಿಳೆಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ.

ಮಾಹಿತಿಗಳ ಪ್ರಕಾರ 2013ರಲ್ಲಿ ಗಂಡ ಹೆಂಡತಿ ಛತ್ತರ್ ಪುರದ ವಸತಿ ಸಮ್ಮುಚ್ಛಯದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದು , ಇಬ್ಬರೂ ಇನ್ಸೂರೆನ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರೆಂದು ಹೇಳಲಾಗಿದೆ.

ಘಟನೆಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ ಆದರೆ ಕೆಲವೊಂದು ಮೂಲಗಳ ಪ್ರಕಾರ ದಂಪತಿಗೆ ಮಕ್ಕಳಿಲ್ಲದ ಕಾರಣ ಮನನೊಂದು ಈ ರೀತಿ ಕೃತ್ಯ ಎಸಗಿರುವ ಅನುಮಾನಗಳೂ ಇವೆ ಎನ್ನಲಾಗಿದೆ.

ಸದ್ಯ ಸ್ಥಳೀಯರ ಹೇಳಿಕೆಯ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next