Advertisement

ಶೀಲ ಶಂಕಿಸಿದವನಿಗೆ ಬೆಂಕಿ ಹಚ್ಚಿದ ಪತ್ನಿ ಮಕ್ಕಳು !

11:57 AM Jan 11, 2018 | Team Udayavani |

ಕೊಪ್ಪಳ: ಶೀಲ ಶಂಕಿಸಿದ ವ್ಯಕ್ತಿಗೆ ಆತನ ಪತ್ನಿ ಮತ್ತು ಮಕ್ಕಳು ಬೆಂಕಿ ಹಚ್ಚಿ ಕೊಲ್ಲಲೆತ್ನಿಸಿದ ಕಳವಳಕಾರಿ  ಘಟನೆ  ಯಲಬುರ್ಗಾದ ಹರಿಶಂಕರ ಬಂಡಿಯಲ್ಲಿ ನಡೆದಿದೆ.

Advertisement

ವರದಿಯಾದಂತೆ  ಗದಗದ  ನರೆಗಲ್‌ ಮೂಲತ ಪ್ರಭಯ್ಯ ಹಿರೇಮಠ ಎಂಬ ವ್ಯಕ್ತಿಗೆ ಪತ್ನಿ ದಾಕ್ಷಾಯಣಿ , ಪುತ್ರರಾದ ಕುಮಾರ ಸ್ವಾಮಿ , ವೀರಯ್ಯ  ಮತ್ತು ತಮ್ಮನ ಹೆಂಡತಿ ಸುಮಿತ್ರಾ ಎನ್ನುವರು ಥಳಿಸಿ ಬೆಂಕಿ ಹಚ್ಚಿದ್ದಾರೆ. 

ಪ್ರಭಯ್ಯ ಗಂಭೀರಗಾಯಕ್ಕೆ ಗುರಿಯಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಕನೂರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next