Advertisement

ಸ್ಮಾರ್ಟ್‌ ಸಿಟಿ ಕಾಮಗಾರಿ ವಿಳಂಬ ಏಕೆ?

02:44 PM Jul 07, 2018 | Team Udayavani |

ದಾವಣಗೆರೆ: ಹಳೆಯ ಭಾಗದ ಚೌಕಿಪೇಟೆ, ಮಂಡಿಪೇಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಶಾಸಕ ಡಾ| ಶಾಮನೂರು ಶಿವಶಂಕರಪ್ಪ ಸ್ಮಾರ್ಟ್‌ಸಿಟಿ ಯೋಜನೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಸಂಬಂಧ ಶಾಸಕರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ತಾವಿದ್ದ ಸ್ಥಳದಲ್ಲೇ ದಿಢೀರ್‌ ಸಭೆ ನಡೆಸಿದ ಅವರು, ನಾಗರಿಕರ ಸಮ್ಮುಖದಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈಗಾಗಲೇ ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ ಎಂಬುದಾಗಿ ನಾಗರೀಕರು ದೂರುತ್ತಿದ್ದಾರೆ. ಅನುಮೋದನೆ ದೊರೆಯುತ್ತಿರುವ ಕಾಮಗಾರಿಗಳ ಅನುಷ್ಠಾನಕ್ಕೆ ವಿಳಂಬ ಮಾಡುತ್ತಿರುವುದು ಏಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
 
ಕಳೆದ 4-5 ತಿಂಗಳ ಹಿಂದೆಯೇ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈಗಲೂ ಅರ್ಧದಷ್ಟು ಕಾಮಗಾರಿ ಸಹ
ಆಗಿಲ್ಲ. ಈ ರೀತಿಯಾದರೆ ಜನರು ಜನಪ್ರತಿನಿಧಿಗಳನ್ನು ದೂರುವುದಿಲ್ಲವೆ? ಅಧಿಕಾರಿಗಳು ಮಾಡಿದ ತಪ್ಪಿಗೆ ನಾವು ಉತ್ತರ ನೀಡಬೇಕಿದೆ ಎಂದು ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

ಹಳೆ ಭಾಗದ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಶೀಘ್ರ ಮುಗಿಸಬೇಕು. ಜತೆಗೆ ಗುಣಮಟ್ಟ ಕಾಪಾಡಿಕೊಳ್ಳಬೇಕು. ಈ
ಭಾಗದಲ್ಲಿ ಕಾಮಗಾರಿಗಳ ವಿಳಂಬದಿಂದ ವ್ಯಾಪಾರ-ವಹಿವಾಟಿಗೆ ಸಾಕಷ್ಟು ತೊಂದರೆ ಆಗಿದೆ. ವರ್ತಕರು ಸಹ ತಾಳ್ಮೆಯಿಂದ ಇದ್ದಾರೆ. ಅವರ ತಾಳ್ಮೆ ಪರೀಕ್ಷಿಸದೆ ಕಾಮಗಾರಿ ಬೇಗ ಮುಗಿಸಿ, ಇಲ್ಲ ಅವರಿಗೆ ಆಗಿರುವ ನಷ್ಟ ತುಂಬಿಕೊಡಿ. ಈಗ ನಡೆಸುತ್ತಿರುವ ಕಾಮಗಾರಿಗಳೆಲ್ಲ ಮುಕ್ತಾಯ ಆದ ನಂತರವೇ ಮುಂದಿನ ಕಾಮಗಾರಿ ಆರಂಭಿಸಬೇಕು.

ಅಲ್ಲಿಯವರೆಗೂ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಬೇಡಿ ಎಂದು ಸೂಚಿಸಿದರು. ಡೆಪ್ಯುಟಿ ಮೇಯರ್‌ ಕೆ. ಚಮನ್‌ಸಾಬ್‌, ಸದಸ್ಯರಾದ ದಿನೇಶ್‌ ಕೆ. ಶೆಟ್ಟಿ, ಮಂಜಮ್ಮ ಹನುಮಂತಪ್ಪ, ಎಸ್‌. ಬಸಪ್ಪ, ಉದ್ಯಮಿ ಅಥಣಿ ವೀರಣ್ಣ, ವರ್ತಕರಾದ ಮುರುಗನ್‌, ಎಂ.ಜಿ. ಬಸವರಾಜಪ್ಪ, ಬಸವರಾಜಯ್ಯ, ಎಂ.ಕೆ. ಬಕ್ಕಪ್ಪ, ಚೌಕಿಪೇಟೆ ಮತ್ತು ಸುತ್ತಮುತ್ತಲಿನ ವರ್ತಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next