Advertisement
ಅದೇ ಸಮಯದಲ್ಲಿ ಅವನ ಹೆಬ್ಬೆರಳು ಕೆಂಪಿರುವೆಯ ಗೂಡಿನ ಮೇಲೆ ಬಿತ್ತು. ಇರುವೆಗಳು ಅವನ ಕಾಲುಗಳ ಮೇಲೆ ಹರಿದಾಡತೊಡಗಿದವು. ಅಂಗಾಲೋಗೆ ಇರುವೆಯೆಂದರೆ ಎಲ್ಲಿಲ್ಲದ ಭಯ. ಆದರೆ ಕಾಲು ಅಲುಗಾಡಿಸಿದರೆ ಅದರ ಮೇಲೆ ಉಪ್ಪು ಸಾಗಿಸುತ್ತಿದ್ದ ಹಳ್ಳಿಗರು ಸಮುದ್ರ ಪಾಲಾಗುವುದು ಖಚಿತವಾಗಿತ್ತು. ಹೀಗಾಗಿ ಹಳ್ಳಿಗರು ದ್ವೀಪ ತಲುಪುವವರೆಗೆ ಕಾದು ನಂತರ ಕಾಲನ್ನು ನೀರಿನಲ್ಲಿ ಮುಳುಗಿಸಿದ. ಇತ್ತ ಹಳ್ಳಿಗರು ಉಪ್ಪು ತೆಗೆದುಕೊಂಡು ವಾಪಸ್ ಮರಳಲು ಅಂಗಾಲೋಗಾಗಿ ಕಾದರು. ಈ ಬಾರಿ ಹಳ್ಳಿಗರು ದೊಡ್ಡ ಪ್ರಮಾಣದಲ್ಲಿ ಉಪ್ಪನ್ನು ತಂದಿದ್ದರು. ಅಂಗಾಲೋ ಬಂದು ಕಾಲನ್ನಿಟ್ಟ. ಹಳ್ಳಿಗರು ಅದರ ಮೇಲೆ ನಡೆಯುತ್ತಿದ್ದಾಗ ಕೆಂಪಿರುವೆಗಳು ಮತ್ತೆ ದಾಳಿ ನಡೆಸಿದವು. ಅಂಗಾಲೋ ಕಾಲು ಕೊಡವಿದ. ಇರುವೆ ಜೊತೆಗೆ ಉಪ್ಪು ಸಮುದ್ರ ಪಾಲಾಯಿತು. ನೀರಿನಲ್ಲಿ ಬಿದ್ದ ಹಳ್ಳಿಗರನ್ನು ತಾನೇ ರಕ್ಷಣೆ ಮಾಡಿದ. ಉಪ್ಪು ನೀರಿಗೆ ಬಿದ್ದಿದ್ದರಿಂದ ಸಮುದ್ರ ಆವತ್ತಿನಿಂದ ಉಪ್ಪಾಯಿತು.
Advertisement
ಸಮುದ್ರ ಉಪ್ಪಾಗಿದ್ದೇಕೆ?
06:00 AM Jun 14, 2018 | |
Advertisement
Udayavani is now on Telegram. Click here to join our channel and stay updated with the latest news.