Advertisement

Bhatkal: ಇಬ್ಬರು ಸಮುದ್ರಪಾಲು

12:51 AM Apr 22, 2024 | Team Udayavani |

ಭಟ್ಕಳ: ಹಡೀನ ಸಮುದ್ರ ಕಿನಾರೆಯಲ್ಲಿ ಆಟ ವಾಡಲು ಹೋಗಿದ್ದ ಇಬ್ಬರು ನೀರು ಪಾಲಾದ ಘಟನೆ ರವಿವಾರ ಸಂಜೆ ಸಂಭವಿಸಿದೆ. ಓರ್ವನ ಮೃತದೇಹ ಪತ್ತೆಯಾಗಿದ್ದು, ಇನ್ನೋರ್ವನಿಗಾಗಿ ಶೋಧ ನಡೆಯುತ್ತಿದೆ.

Advertisement

ಹೆಬಳೆಯ ಮೌಲಾನಾ ನ್ಯಾಮತ್ತುಲ್ಲ ಅಸ್ಕೇರಿ ಅವರ ಪುತ್ರ ಇನಾಮ್‌ ಅಸ್ಕೇರಿ (14) ಮೃತಪಟ್ಟಿದ್ದು, ಆಜಾದ ನಗರದ ನಿವಾಸಿ ಮೊಹಮ್ಮದ್‌ ಕಾಸಿಪ್‌ ರುಕ್ನುದ್ದೀನ್‌ (22) ನಾಪತ್ತೆಯಾದವರು. ಹೆಬಳೆ ಹಾಗೂ ಆಜಾದ ನಗರದ ಎರಡು ಕುಟುಂಬದವರು ಹಡೀನ ಸಮುದ್ರ ಕಿನಾರೆಗೆ ತೆರಳಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next