Advertisement

ಅಲೋಪತಿ ವೈದ್ಯರ ವಿರುದ್ಧ ಅಸಮಾಧಾನವೇಕೆ? ಬಾಬಾ ರಾಮ್‌ದೇವ್‌ಗೆ ಸುಪ್ರೀಂಕೋರ್ಟ್ ತರಾಟೆ

09:11 PM Aug 23, 2022 | Team Udayavani |

ನವದೆಹಲಿ: ಅಲೋಪತಿ ವೈದ್ಯರ ವಿರುದ್ಧ ಅಸಮಾಧಾನವೇಕೆ ಎಂದು ಯೋಗಗುರು ಬಾಬಾ ರಾಮ್‌ದೇವ್‌ ಅವರನ್ನು ಸುಪ್ರೀಂಕೋರ್ಟ್‌ ಮಂಗಳವಾರ ಖಡಕ್‌ ಆಗಿ ಪ್ರಶ್ನಿಸಿದೆ.

Advertisement

ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ನ್ಯಾಯಪೀಠ ರಾಮದೇವ್‌ ಅವರು ಯೋಗ ಮತ್ತು ಆಯುರ್ವೇದವನ್ನು ಪ್ರಚಾರ ಮಾಡಿದ್ದಾರೆ. ಅದರ ಬಗ್ಗೆ ಖುಷಿಯಿದೆ. ಹಾಗೆಂದ ಮಾತ್ರಕ್ಕೆ ಅವರು ಬೇರೆ ವೈದ್ಯಕೀಯ ಪದ್ಧತಿಯನ್ನು ಅವಹೇಳನ ಮಾಡುವಂತಿಲ್ಲ ಎಂದು ಕಟುವಾಗಿ ಹೇಳಿದೆ.

ಕೊರೊನಾ ಹೆಚ್ಚಾಗಿದ್ದ ಸಂದರ್ಭದಲ್ಲಿ ಅಲೋಪತಿ ವೈದ್ಯ ಪದ್ಧತಿ ವಿರುದ್ಧ ರಾಮ್‌ದೇವ್‌ ಮಾಡಿದ್ದ ಟೀಕೆ ವಿರುದ್ಧ ಇಂಡಿಯನ್‌ ಮೆಡಿಕಲ್‌ ಎಸೋಸಿಯೇಷನ್‌ ಸೇರಿದಂತೆ ಹಲವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಪೀಠ ಈ ಮಾತುಗಳನ್ನಾಡಿದೆ. ಜತೆಗೆ ಈ ಬಗ್ಗೆ ಪತಿಕ್ರಿಯೆ ನೀಡಲು ಕೇಂದ್ರ ಸರ್ಕಾರಕ್ಕೂ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next