Advertisement

ಸತ್ಯ ಹೇಳಿದರೆ ನೋವೇಕೆ?: ನೂಪುರ್ ಶರ್ಮಾಗೆ ಪ್ರಜ್ಞಾ ಠಾಕೂರ್ ಬೆಂಬಲ

10:46 PM Jun 11, 2022 | Team Udayavani |

ಭೋಪಾಲ್‌: ಪ್ರವಾದಿಗಳ ಬಗ್ಗೆ ಹೇಳಿಕೆ ಕೊಟ್ಟು ಭಾರೀ ಸುದ್ದಿಯಾದ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾಗೆ ಸಂಸದೆ ಪ್ರಜ್ಞಾ ಠಾಕೂರ್‌ ಶನಿವಾರ ಬೆಂಬಲಿಸಿದ್ದಾರೆ.

Advertisement

“ನಮ್ಮ ದೇವತೆಗಳನ್ನು ನಿಂದಿಸಿದರೆ ಮಾತ್ರ ಸತ್ಯವೇ?’ ಎಂದು ವಿರೋಧಿಗಳನ್ನು ಪ್ರಶ್ನಿಸಿದ್ದಾರೆ. ವಿವಾದದ ಬಗ್ಗೆ ಮಾತನಾಡಿರುವ ಪ್ರಜ್ಞಾ ಠಾಕೂರ್‌, “ಜ್ಞಾನವಾಪಿಯಲ್ಲಿ ದೇವಸ್ಥಾನವಿತ್ತು, ಈಗಲೂ ಇದೆ. ಅವರು ನಮ್ಮನ್ನು ಅಷ್ಟು ನಿಂದಿಸುವಾಗ ನಾವು ಸತ್ಯವನ್ನೂ ಹೇಳುವಂತಿಲ್ಲವೇ? ನೀವು ನಮ್ಮ ದೇವತೆಗಳ ಬಗ್ಗೆ ಸತ್ಯ ಹೇಳಿದಾಗ ಅದನ್ನು ನಾವು ಒಪ್ಪಿಕೊಂಡಿದ್ದೇವೆ.

ಆದರೆ ಈಗ ನಾವು ಸತ್ಯ ಹೇಳುವಾಗ ನಿಮಗೇಕೆ ನೋವಾಗುತ್ತಿದೆ. ಇದು ಇತಿಹಾಸ ಹಾಳಾಗಿದೆ ಎನ್ನುವುದನ್ನು ತೋರಿಸುತ್ತದೆ’ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next