Advertisement

Politics: ಕಿಸಾನ್‌ ಸಮ್ಮಾನ್‌  ನಿಲ್ಲಿಸಿದ್ದು ಯಾಕೆ?; ಬಿ.ಎಸ್‌.ಯಡಿಯೂರಪ್ಪ

11:41 PM Apr 04, 2024 | Team Udayavani |

ಮಂಡ್ಯ: ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರೈತರಿಗೆ ಕೇಂದ್ರ ಸರಕಾರ 6 ಸಾವಿರ ರೂ. ಹಾಗೂ ರಾಜ್ಯ ಸರಕಾರ 4 ಸಾವಿರ ರೂ.  ನೀಡುತ್ತಿತ್ತು. ಆದರೆ ರಾಜ್ಯ ಕಾಂಗ್ರೆಸ್‌ ಸರಕಾರ ಏಕಾಏಕಿ ರೈತರಿಗೆ ಹಣ ನೀಡದೆ ಸ್ಥಗಿತ ಮಾಡಿದೆ. ಜತೆಗೆ ಮಹಿಳೆಯರು ಸ್ವಾಭಿಮಾನದಿಂದ ಜೀವನ ನಡೆಸುವ ಉದ್ದೇಶದಿಂದ ಭಾಗ್ಯಲಕ್ಷ್ಮೀ ಯೋಜನೆಯನ್ನು ತಂದಿದ್ದೆ. ಅದನ್ನು ನಿಲ್ಲಿಸಿದ್ದು ಯಾಕೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಶ್ನಿಸಿದರು.

Advertisement

ಬೃಹತ್‌ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಂತಿದ್ದರೂ  ಕುಮಾರಸ್ವಾಮಿ ಗೆಲ್ಲುತ್ತಿದ್ದರು. ಆದರೆ ನಿಮ್ಮ ಅಪೇಕ್ಷೆಯಂತೆ ಮಂಡ್ಯದಲ್ಲಿ ಸ್ಪರ್ಧಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಗಾಳಿ ಬೀಸುತ್ತಿದ್ದು, ಕುಮಾರಸ್ವಾಮಿ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಕೊಡುವಂತೆ ಮನವಿ ಮಾಡಿದರು.

ಡಾ| ಮಂಜುನಾಥ್‌ ಗೆದ್ದರೆ ಉನ್ನತ ಹುದ್ದೆ: ಯಡಿಯೂರಪ್ಪ

ರಾಮನಗರ: ಜನಸೇವೆ ಮೂಲಕ ಇಡೀ ನಾಡಿಗೆ ಮಾದರಿಯಾಗಿರುವ ಡಾ| ಸಿ.ಎನ್‌.ಮಂಜುನಾಥ್‌ ಅವರನ್ನು ಅವಿರೋಧವಾಗಿ ಆಯ್ಕೆಮಾಡಬೇಕಿತ್ತು. ವಿಪಕ್ಷಗಳು ಇದನ್ನು ಅರಿತುಕೊಳ್ಳಬೇಕು. ಆದರೆ ಚುನಾವಣೆ ಎದುರಾಗಿದೆ. ಕಾರ್ಯಕರ್ತರು ನಾವೇ ಮಂಜುನಾಥ್‌ ಎಂಬಂತೆ ಕೆಲಸ ಮಾಡಬೇಕು. ಅವರು ಗೆಲುವು ಸಾಧಿಸಿದರೆ ಉನ್ನತ ಹುದ್ದೆ ಅಲಂಕರಿಸಲಿದ್ದಾರೆ ಎಂದು ಯಡಿಯೂರಪ್ಪ ರಾಮನಗರದಲ್ಲಿ ಭವಿಷ್ಯ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next