Advertisement

ರಾಮ ವಿಶ್ವನಾಯಕ,ಅಯೋಧ್ಯೆಯಲ್ಲೇ ಮಂದಿರ ಯಾಕೆ?: ಫಾರೂಕ್‌ ಅಬ್ದುಲ್ಲಾ 

11:47 AM Nov 27, 2018 | |

ಹೊಸದಿಲ್ಲಿ: ಅಯೋಧ್ಯೆಯ ರಾಮ ಮಂದಿರ ಮತ್ತು ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ ಪ್ರತಿಕ್ರಿಯೆ ನೀಡಿದ್ದಾರೆ. 

Advertisement

ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಫಾರೂಕ್‌ ‘ರಾಮ ಸರ್ವವ್ಯಾಪಿ ಯಾಗಿದ್ದು  ಇಡೀ ವಿಶ್ವಕ್ಕೆ ಸೇರಿದವನು. ಅವನಿಗೆ ಅಯೋಧ್ಯೆಯಲ್ಲೇ ಮಂದಿರ ಕಟ್ಟಬೇಕಿಲ್ಲ’ ಎಂದಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪನ್ನು ಕೇಳಲು ಯಾರಾದರು ಸಿದ್ದರಿದ್ದಾರೆಯೇ?, ಕೋರ್ಟನ್ನು ನಿಷ್ಕ್ರೀಯ ಮಾಡಲು ಯತ್ನಗಳು ನಡೆಯುತ್ತಿವೆ. ನಾವೇನು ಪ್ರಜಾಪ್ರಭುತ್ವದಲ್ಲಿ ಬದುಕುತ್ತಿದ್ದೇವಾ ಎಂದು ಫಾರೂಕ್‌ ಪ್ರಶ್ನಿಸಿದರು. 

ಫಾರೂಕ್‌ ಹೇಳಿಕೆಗೆ ವಿರೋಧ ವ್ಯಕ್ತ ಪಡಿಸಿರುವ ಜೆಡಿಯು ನಾಯಕ್‌ ಪವನ್‌ ವರ್ಮಾ ‘ಯಾರು ಹೇಳಿದ್ದು, ಅಯೋಧ್ಯೆಯಲ್ಲಿ ಕಟ್ಟಬಾರದೇ ?, ಹಿಂದುಗಳಿಗೆ ಅಯೋಧ್ಯೆಯಲ್ಲೇ ಕಟ್ಟಬೇಕು. ಅದು ರಾಮನ ಜನ್ಮಭೂಮಿ’ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next