Advertisement

ರಫೇಲ್ ಆರೋಪ; ರಾಹುಲ್ ಗಾಂಧಿಗೆ ಕುಮ್ಮಕ್ಕು ಕೊಟ್ಟಿದ್ದು ಯಾರು? ಕೂಡಲೇ ಕ್ಷಮೆಯಾಚಿಸಿ; BJP

09:51 AM Nov 15, 2019 | Team Udayavani |

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚೌಕೀದಾರ್ ಚೋರ್ ಹೈ ಎಂದು ಆರೋಪಿಸಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ.

Advertisement

ರಾಹುಲ್ ಗಾಂಧಿ ಕೇವಲ ಪ್ರಧಾನಿಯನ್ನು ಮಾತ್ರ ಕಳ್ಳ ಎಂದು ಆರೋಪಿಸಿಲ್ಲ, ಆದರೆ ಫ್ರಾನ್ಸ್ ನ ಮಾಜಿ ಪ್ರಧಾನಿ ಹೇಳಿಕೆಯ ಬಗ್ಗೆ ಸುಳ್ಳು ಹೇಳಿ ಅದನ್ನು ಸುಪ್ರೀಂಕೋರ್ಟ್ ಹೇಳಿದ್ದು ಎಂದು ಆರೋಪಿಸಿರುವುದಾಗಿ ಕೇಂದ್ರ ಸಚಿವರ ರವಿಶಂಕರ್ ಪ್ರಸಾದ್ ಆರೋಪಿಸಿದರು.

ಈ ರೀತಿ ಆರೋಪಿಸಲು ರಾಹುಲ್ ಗಾಂಧಿಗೆ ಕುಮ್ಮಕ್ಕು ನೀಡಿದವರು ಯಾರು ಎಂಬುದು ದೇಶದ ಜನರಿಗೆ ತಿಳಿಯಬೇಕಾಗಿದೆ. ಇಡೀ ಪ್ರಚಾರ ತುಂಬಾ ಅನುಮಾನಸ್ಪದವಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ರಾಹುಲ್ ಗಾಂಧಿ ಇಂದು ಕ್ಷಮೆಯಾಚಿಸಬೇಕಾಗದ ಅಗತ್ಯವಿದೆ. ನಿಮ್ಮನ್ನು ರಕ್ಷಿಸಿಕೊಳ್ಳಲು ಕೋರ್ಟ್ ನಲ್ಲಿ ಕ್ಷಮೆಯಾಚಿಸಿದ್ದೀರಿ, ಆದರೆ ದೇಶದ ಜನರ ಮುಂದೆ ಕ್ಷಮೆಯಾಚಿಸುವುದಿಲ್ಲವೇ ಎಂದು ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next