Advertisement

ವಿನೋದ್‌, ಕೃಷ್ಣ ಇಬ್ಬರಲ್ಲಿ “ವೇದ-ವ್ಯಾಸ’ಯಾರು?

03:48 PM Oct 14, 2017 | |

ವಿನೋದ್‌ ಪ್ರಭಾಕರ್‌ ಅಭಿನಯದಲ್ಲಿ ಓಂಪ್ರಕಾಶ್‌ ರಾವ್‌ ಒಂದು ಚಿತ್ರ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಹಳೆಯದೇ. ಆದರೆ, ಆ ಚಿತ್ರದ ಹೆಸರೇನೆಂದು ವಿನೋದ್‌ ಆಗಲೀ, ಓಂಪ್ರಕಾಶ್‌ ರಾವ್‌ ಆಗಲೀ ಬಾಯಿಬಿಟ್ಟಿರಲಿಲ್ಲ. ಈಗ ಆ ಚಿತ್ರಕ್ಕೆ ಕೊನೆಗೂ ಹೆಸರು ಫೈನಲ್‌ ಆಗಿದೆ. ಚಿತ್ರಕ್ಕೆ “ವೇದ-ವ್ಯಾಸ’ ಎಂದು ಹೆಸರಿಡಲಾಗಿದ್ದು, ಚೆನ್ನೈನಲ್ಲಿ ಸದ್ದಿಲ್ಲದೆ ಚಿತ್ರದ ಫೋಟೋಶೂಟ್‌ ಸಹ ಆಗಿದೆ. ಚೆನ್ನೈನ ಎ.ವಿ.ಎಂ ಸ್ಟುಡಿಯೋದಲ್ಲಿ ಚಿತ್ರಕ್ಕೆ ವಿಶೇಷವಾದ ಫೋಟೋ ಶೂಟ್‌ ಮಾಡಲಾಗಿದೆ. 

Advertisement

ವಿಶೇಷವೆಂದರೆ, ಈ ಚಿತ್ರದಲ್ಲಿ “ಮದರಂಗಿ ಕೃಷ್ಣ’ ಸಹ ಕಾಣಿಸಿಕೊಳ್ಳುತ್ತಿರುವುದು. ಹಾಗಾಗಿ ಇದು ಪುರಾಣದ ವೇದವ್ಯಾಸ ಅಲ್ಲ, “ವೇದ-ವ್ಯಾಸ’ ಎಂಬ ಇಬ್ಬರ ಸುತ್ತ ಈ ಚಿತ್ರ ಸುತ್ತುತ್ತದೆ. ವಿನೋದ್‌ ಮತ್ತು ಕೃಷ್ಣ ಇಬ್ಬರಲ್ಲಿ ವೇದ ಯಾರು, ವ್ಯಾಸ ಯಾರು ಎಂಬುದನ್ನು ಇನ್ನೂ ಚಿತ್ರತಂಡ ಬಹಿರಂಗಪಡಿಸಿಲ್ಲ. ಒಟ್ಟಿನಲ್ಲಿ ಚಿತ್ರದಲ್ಲಿ ಇಬ್ಬರೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮಂಡ್ಯದಲ್ಲಿ 1973-74ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಕಥೆ ರಚಿಸಲಾಗಿದೆ.

ಈ ಚಿತ್ರವನ್ನು ರೇಣುಕಾ ಮೂವಿ ಮೇಕರ್ ಬ್ಯಾನರ್‌ನಡಿ ಎ.ಎಂ. ಉಮೇಶ್‌ ರೆಡ್ಡಿ ನಿರ್ಮಿಸುತ್ತಿದ್ದಾರೆ. “ವೇದ-ವ್ಯಾಸ’ ಚಿತ್ರದ ಚಿತ್ರೀಕರಣ ಡಿಸೆಂಬರ್‌ ಮೂರರಿಂದ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ಇದೇ 20ರಂದು ಹಂಸಲೇಖ ಅವರ ಸ್ಟುಡಿಯೋದಲ್ಲಿ ಚಿತ್ರದ ಹಾಡುಗಳ ಧ್ವನಿಮುದ್ರಣ ಪ್ರಾರಂಭವಾಗಲಿದೆ. ಸಂಗೀತ ಸಂಯೋಜನೆಯ ಜೊತೆಗೆ ಹಂಸಲೇಖ ಅವರು ಚಿತ್ರಕ್ಕೆ ಸಾಹಿತ್ಯವನ್ನೂ ರಚಿಸಿದ್ದಾರೆ.

ಈ ಚಿತ್ರಕ್ಕೆ ಓಂಪ್ರಕಾಶ್‌ ರಾವ್‌ ಅವರ ಪತ್ನಿ ಡೆನ್ನಿಸಾ ಪ್ರಕಾಶ್‌ ಕಥೆ ಬರೆದಿದ್ದು, ಓಂಪ್ರಕಾಶ್‌ ರಾವ್‌ ಚಿತ್ರಕಥೆ ಬರೆದು, ನಿರ್ದೇಶಿಸುತ್ತಿದ್ದಾರೆ. ಇನ್ನು ಎಂ.ಎಸ್‌. ರಮೇಶ್‌ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರದಲ್ಲಿ ವಿನೋದ್‌ ಪ್ರಭಾಕರ್‌ ಮತ್ತು “ಮದರಂಗಿ’ ಕೃಷ್ಣ ಜೊತೆಗೆ ಅಭಿಮನ್ಯು ಸಿಂಗ್‌, ಶ್ರೀನಿವಾಸಮೂರ್ತಿ, ಅವಿನಾಶ್‌, ರಂಗಾಯಣ್‌ ರಘು, ಶೋಭರಾಜ್‌, ಚಿತ್ರಾ ಶೆಣೈ, ಸುಧಾ ಬೆಳವಾಡಿ ನಟಿಸುತ್ತಿದ್ದು, ನಾಯಕಿಯ ಹುಡುಕಾಟ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next