Advertisement

ಜೀರೋ ಟ್ರಾಫಿಕ್‌ ಕೊಟ್ಟವರು ಯಾರು?

10:13 AM Jul 20, 2019 | Lakshmi GovindaRaj |

ವಿಧಾನಸಭೆ: ಸ್ಪೀಕರ್‌ ಕಚೇರಿಗೆ ರಾಜೀನಾಮೆ ಸಲ್ಲಿಸಿದ ಶಾಸಕರು ನಂತರ ರಾಜ್ಯಪಾಲರಿಗೂ ಪ್ರತಿ ಸಲ್ಲಿಸಿದರು. ನಂತರ ಶಾಸಕರು ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತೆರಳಲು ಅವರಿಗೆ ಜೀರೋ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸಲಾಯಿತು. ನಗರ ಪೊಲೀಸ್‌ ಆಯುಕ್ತರು ಯಾವ ಆಧಾರದಲ್ಲಿ ಈ ಕ್ರಮ ಕೈಗೊಂಡರು ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಪ್ರಶ್ನಿಸಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌, ಎಚ್‌ಎಎಲ್‌ ವಿಮಾನ ನಿಲ್ದಾಣ ಖಾಸಗಿಯವರ ನಿರ್ವಹಣೆಯಲ್ಲಿದೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ರಾಜ್ಯಪಾಲರಿಗೆ ಜೀರೋ ಟ್ರಾಫಿಕ್‌ ವ್ಯವಸ್ಥೆ ಇರುತ್ತದೆ. ಈ ಶಾಸಕರಿಗೆ ಯಾವ ಘನ ಕಾರ್ಯಕ್ಕೆ ಕೊಟ್ಟರು ಎಂಬುದನ್ನು ಮುಖ್ಯಮಂತ್ರಿಗಳು, ಗೃಹ ಸಚಿವರು ಪೊಲೀಸ್‌ ಆಯುಕ್ತರನ್ನು ಕರೆಸಿ ಕೇಳಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next