Advertisement

ಬಳ್ಳಾರಿ ಜಿಲ್ಲೆಯನ್ನು ಬರ್ಬಾದ್ ಮಾಡಿದ್ದು ಯಾರು?: ರೆಡ್ಡಿಗೆ ಡಿಕೆಶಿ

12:33 PM Oct 29, 2018 | Team Udayavani |

ಬಳ್ಳಾರಿ: ಬಳ್ಳಾರಿ ಜಿಲ್ಲೆಯನ್ನು ಬರ್ಬಾದ್ ಮಾಡಿದ್ದು ಯಾರು? ಶ್ರೀರಾಮುಲು ಅವರನ್ನು ಏಕಾಂಗಿ ಮಾಡಿದ್ದು ಯಾರು? ದೊಡ್ಡ, ದೊಡ್ಡವರೇ ಬರಲಿ ಬಿಡಿ. ನಾನು ಚುನಾವಣೆಗಳಲ್ಲಿ ಇದನ್ನೆಲ್ಲಾ ನೋಡಿದ್ದೇನೆ..ಇದು ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿ ಆರೋಪಕ್ಕೆ ಕಾಂಗ್ರೆಸ್ ಮುಖಂಡ, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ನೀಡಿರುವ ಪ್ರತಿಕ್ರಿಯೆ.

Advertisement

 (ಇದನ್ನೂ ಓದಿ: ಅಕ್ರಮ ಗಣಿಗಾರಿಕೆ, 1 ಕೋಟಿ ಕೂಡಾ ವಸೂಲಿ ಮಾಡಲಾಗಿಲ್ಲ; ರೆಡ್ಡಿ ಆಕ್ರೋಶ)

ಸೋಮವಾರ ಮೊಳಕಾಲ್ಮೂರಿನಲ್ಲಿ ಗಾಲಿ ಜನಾರ್ದನ ರೆಡ್ಡಿ ಪತ್ರಿಕಾಗೋಷ್ಠಿ ನಡೆಸಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಡಿಕೆಶಿ ಈ ರೀತಿ ತಿರುಗೇಟು ನೀಡಿದ್ದಾರೆ.

ಬಳ್ಳಾರಿ ಜಿಲ್ಲೆಗೆ ಯಾರನ್ನೇ ಕರೆಯಿಸಿಕೊಳ್ಳಲಿ. ನಾನು ಹಲವು ಚುನಾವಣೆಗಳನ್ನು ಎದುರಿಸಿದ್ದೇನೆ. ಗಡಗಿ ಚೆನ್ನಮ್ಮ ವೃತ್ತ ಕೆಡವಿದವರು ಯಾರು? ಗಣಿಗಾರಿಕೆಯಿಂದ ಬಳ್ಳಾರಿ ಜಿಲ್ಲೆಯನ್ನು ಹಾಳುಗೆಡವಿದವರು ಯಾರು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next