Advertisement

ನೃಪತುಂಗ ರಸ್ತೆಯ ವೈಟ್‌ಟಾಪಿಂಗ್‌ ಅರ್ಧ ಪೂರ್ಣ

11:55 AM Mar 31, 2017 | |

ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ನೃಪತುಂಗ ರಸ್ತೆಯಲ್ಲಿ ಬಿಬಿಎಂಪಿಯಿಂದ ಕೈಗೆತ್ತಿಕೊಂಡಿರುವ ವೈಟ್‌ಟಾಪಿಂಗ್‌ ಕಾಮಗಾರಿಯ ಮೊದಲ ಹಂತ ಪೂರ್ಣಗೊಂಡಿದ್ದು, ಸೋಮವಾರದಿಂದ ಎರಡನೇ ಹಂತದ ಕಾಮಗಾರಿ ಆರಂಭವಾಗಲಿದೆ. 

Advertisement

ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಬಾರದು ಎಂಬ ದೃಷ್ಟಿಯಿಂದ ಎರಡು ಹಂತದಲ್ಲಿ ನೃಪತುಂಗ ರಸ್ತೆಯ ವೈಟ್‌ಟಾಪಿಂಗ್‌ ಕೆಲಸ ಕೈಗೆತ್ತಿಕೊಳ್ಳಲಾಗಿತ್ತು. ಫೆಬ್ರುವರಿ 26ರಂದು ಮೊದಲ ಹಂತದ ಕಾಮಗಾರಿ ಆರಂಭಿಸಿದ್ದ ಪಾಲಿಕೆಯ ಅಧಿಕಾರಿಗಳು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುತ್ತಿದ್ದಾರೆ. ಅದರ ಹಿನ್ನೆಲೆಯಲ್ಲಿ ಸೋಮವಾರದಿಂದ ಎರಡನೇ ಹಂತದ ಅಂದರೆ, ಮತ್ತೂಂದು ಬದಿಗೆ ಕಾಂಕ್ರಿಟ್‌ ಹಾಕುವ ಕಾಮಗಾರಿ ಆರಂಭಿಸಲು ಯೋಜನೆ ರೂಪಿಸಿದ್ದಾರೆ. 

ಈಗಾಗಲೇ ಕಾಮಗಾರಿ ಪೂರ್ಣಗೊಂಡಿರುವ ಭಾಗದಲ್ಲಿ ಸೋಮವಾರದಿಂದ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ, ಮತ್ತೂಂದು ಬದಿಯಲ್ಲಿ ಕಾಂಕ್ರಿಟ್‌ ಹಾಕುವ ಕಾಮಗಾರಿ ಆರಂಭಿಸಲಾಗುತ್ತದೆ. ಸಂಪೂರ್ಣ ರಸ್ತೆಗೆ ಕಾಂಕ್ರಿಟ್‌ ಹಾಕಲು 10-15 ದಿನಗಳ ಅಗತ್ಯವಿದ್ದು, ಕನಿಷ್ಠ 25-30 ದಿನಗಳು ಕಾಂಕ್ರಿಟ್‌ಅನ್ನು ಕ್ಯೂರಿಂಗ್‌ಗೆ ಬಿಡಬೇಕಾಗು¤ದೆ. ಹೀಗಾಗಿ ಶೀಘ್ರ ಕಾಂಕ್ರಿಟ್‌ ಹಾಕಲು ಅಧಿಕಾರಿಗಳು ಪೂರ್ವ ತಯಾರಿ ನಡೆಸಿದ್ದಾರೆ. 

ನೃಪತುಂಗ ರಸ್ತೆಯಲ್ಲಿ ಕಳೆದೊಂದು ವರ್ಷದಿಂದ ಟೆಂಡರ್‌ಶ್ಯೂರ್‌ ಕಾಮಗಾರಿ ಪ್ರಗತಿಯಲ್ಲಿದ್ದಿದ್ದರಿಂದ ವಾಹನಗಳು ಆಮೆಗತಿಯಲ್ಲಿ ಸಂಚರಿಸುತ್ತಿದ್ದವು. ಇದರೊಂದಿಗೆ ವೈಟ್‌ಟಾಪಿಂಗ್‌ ಕಾಮಗಾರಿ ಆರಂಭಿಸಿ ಒಂದು ಬದಿಯಲ್ಲಿ ವಾಹನ ಸಂಚಾರ ನಿಷೇಧಗೊಳಿಸಿರುವುದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಅದರ ಹಿನ್ನೆಲೆಯಲ್ಲಿ ಈಗಾಗಲೇ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ, ಸಂಚಾರ ದಟ್ಟಣೆ ಮಾತ್ರ ಕಡಿಮೆಯಾಗಿಲ್ಲ. 

ಟೆಂಡರ್‌ ಶ್ಯೂರ್‌ನ ಮೊದಲ ವೈಟ್‌ಟಾಪಿಂಗ್‌: ನಗರದಲ್ಲಿ ಮೊದಲ ಬಾರಿಗೆ ಹಡ್ಸನ್‌ ವೃತ್ತದಿಂದ ಕಸ್ತೂರಿ ಬಾ ರಸ್ತೆಯನ್ನು 2.40 ಕೋಟಿ ವೆಚ್ಚದಲ್ಲಿ ವೈಟ್‌ ಟಾಪಿಂಗ್‌ ಮಾಡಲಾಯಿತು. ಈಗ ನೃಪತುಂಗ ರಸ್ತೆಯನ್ನು ಟೆಂಡರ್‌ಶ್ಯೂರ್‌ ಅಡಿಯಲ್ಲಿ ವೈಟ್‌ ಟಾಪಿಂಗ್‌  ಮಾಡಲಾಗುತ್ತಿದೆ. ಇದರೊಂದಿಗೆ ಟೆಂಡರ್‌ಶ್ಯೂರ್‌ನ ಅಡಿಯಲ್ಲಿ ಮಾಡಲಾದ ಮೊದಲ ವೈಟ್‌ಟಾಪಿಂಗ್‌ ರಸ್ತೆ ಇದು ಎನಿಸಿಕೊಳ್ಳಲಿದೆ. ವೈಟ್‌ಟಾಪಿಂಗ್‌ ರಸ್ತೆ ಕನಿಷ್ಠ 25 ವರ್ಷಗಳ ಕಾಲ ಬಾಳಿಕೆ ಬರಲಿದ್ದು, ಮಳೆಗಾಲದಲ್ಲಿ ಗುಂಡಿಗಳು ಸೃಷ್ಟಿಯಾಗು ವುದಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಾರೆ. 

Advertisement

ಪರಸರವಾದಿಗಳಿಂದ ಟೀಕೆ!: ನೃಪತುಂಗ ರಸ್ತೆಯಲ್ಲಿ ಕಾಂಕ್ರಿಟ್‌ ಕಾಮಗಾರಿ ಆರಂಭಿಸಿ, ವಾಹನಗಳನ್ನು ಕಬ್ಬನ್‌ ಪಾರ್ಕ್‌ ಮೂಲಕ ಸಂಚರಿಸಲು ಅವಕಾಶ ನೀಡಲಾಗಿದೆ. ಈ ಹಿಂದೆ ಕೇವಲ ದ್ವಿಚಕ್ರ ವಾಹನ ಹಾಗೂ ಕಾರುಗಳಿಗೆ ಮಾತ್ರ ಉದ್ಯಾನದೊಳಗೆ ಪ್ರವೇಶಿಸಲು ಅವಕಾಶ ನೀಡುವುದಾಗಿ ತಿಳಿಸಲಾಗಿತ್ತು. ಆದರೆ, ಕೆಲ ದಿನಗಳಿಂದೀಚೆಗೆ ಬೃಹತ್‌ ವಾಹನಗಳು ಉದ್ಯಾನದೊಳಗೆ ಬರುತ್ತಿರುವುದರಿಂದ ಶಬ್ದ ಮಾಲಿನ್ಯ ಹೆಚ್ಚಾಗಿದೆ. ಉದ್ಯಾನದಲ್ಲಿನ ಪಕ್ಷಿಗಳು ಹಾಗೂ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮೇ ಹೊತ್ತಿಗೆ ಸಂಚಾರಕ್ಕೆ ಮುಕ್ತ
ನೃಪತುಂಗ ರಸ್ತೆಯ ವೈಟ್‌ ಟಾಪಿಂಗ್‌ ಕಾಮಗಾರಿ ಅರ್ಧ ಮುಗಿದಿದ್ದು, ಸೋಮವಾರದಿಂದ ಎರಡನೇ ಹಂತದ ಕಾಮಗಾರಿ ಪ್ರಾರಂಭವಾಗಲಿದೆ. ರಸ್ತೆಗೆ ಕಾಂಕ್ರಿಟ್‌ ಹಾಕುವ ಕಾಮಗಾರಿ 10 ದಿನಗಳೊಳಗೆ ಮುಗಿಯಲಿದೆ. ಆದರೆ, ಕಾಂಕ್ರಿಟ್‌ ಕ್ಯೂರಿಂಗ್‌ಗಾಗಿ ಕನಿಷ್ಠ 25 ದಿನಗಳು ಬಿಡಬೇಕಾಗುತ್ತದೆ. ಹಾಗಾಗಿ ಈಗಾಗಲೇ ಕಾಂಕ್ರಿಟ್‌ ಹಾಕಲು ಅಗತ್ಯ ಸಿದ್ಧತೆಗಳನ್ನು ನಡೆಸಲಾಗಿದ್ದು, ಮೇಲ ಮೊದಲ ವಾರದೊಳಗೆ ನೃಪತುಂಗ ರಸ್ತೆ ಸಂಪೂರ್ಣವಾಗಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ.
=ಕೆ.ಟಿ.ನಾಗರಾಜ್‌, ಪಾಲಿಕೆಯ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್‌ 

Advertisement

Udayavani is now on Telegram. Click here to join our channel and stay updated with the latest news.

Next