Advertisement

ಭಾರತದ ಮೌಲ್ವಿಗಳು ಇನ್ನೂ 11ನೇ ಶತಮಾನದಲ್ಲಿದ್ದಾರೆ; ಸ್ವಾಮಿ

02:43 PM Nov 15, 2017 | Team Udayavani |

ನವದೆಹಲಿ: ಸೌದಿ ಅರೇಬಿಯಾ ಯೋಗ ಕಲಿಕೆ ಹಾಗೂ ಬೋಧನೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಮುಸ್ಲಿಮರ ವಿರುದ್ಧದ ವಾಗ್ದಾಳಿಯನ್ನು ಮುಂದುವರಿಸಿರುವ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ, ಭಾರತದಲ್ಲಿರುವ ಮುಸ್ಲಿಮ್ ಮಾಲ್ವಿಗಳು ಇನ್ನೂ ಸಂಪ್ರದಾಯವಾದಿಗಳಾಗಿಯೇ ಮುಂದುವರಿದಿದ್ದಾರೆ ಎಂದು ದೂರಿದರು.

Advertisement

ಇಸ್ಲಾಮಿಕ್ ರಾಷ್ಟ್ರಗಳು ಪ್ರಗತಿಯತ್ತ ಹೆಜ್ಜೆ ಹಾಕುತ್ತಿದ್ದರೆ ಭಾರತದಲ್ಲಿರುವ ಮುಸ್ಲಿಮರು ಸಂಕುಚಿತ ದೃಷ್ಟಿಕೋನ ಹೊಂದಿದ್ದಾರೆ ಎಂದು ಸ್ವಾಮಿ ವಾಗ್ದಾಳಿ ನಡೆಸಿದರು. 

ಭಾರತದಲ್ಲಿರುವ ಎಲ್ಲಾ ಮೌಲ್ವಿಗಳು ಕಟ್ಟಾ ಸಂಪ್ರದಾಯವಾದಿಗಳಾಗಿದ್ದಾರೆ, ಜಗತ್ತಿನಲ್ಲಿರುವ ಇಸ್ಲಾಮಿಕ್ ರಾಷ್ಟ್ರಗಳು ಆಧುನಿಕತೆಯತ್ತ ವಾಲುತ್ತಿವೆ, ಆದರೆ ಇವರು ಇನ್ನೂ 11ನೇ ಶತಮಾನದಲ್ಲಿಯೇ ಬದುಕುತ್ತಿದ್ದಾರೆ ಎಂದು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಯೋಗ ಎನ್ನುವುದು ವೈಜ್ಞಾನಿಕವಾದದ್ದು ಹೀಗಾಗಿ ಸೂರ್ಯ ನಮಸ್ಕಾರದ ವಿರುದ್ಧ ಧಾರ್ಮಿಕವಾಗಿ ಅದನ್ನು ವಿರೋಧಿಸಬೇಕಾದ ಅಗತ್ಯವಿರಲಿಲ್ಲ ಎಂದರು. ಸೂರ್ಯ ಒಂದು ಗ್ರಹ, ಹಿಂದುಗಳು ದೇವರು ಎಂದು ಕರೆಯುತ್ತಾರೆ, ಆದರೆ ನೀವು ಸೂರ್ಯ ಗ್ರಹ ಎಂದು ಕರೆಯಿರಿ ಎಂದು ಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next