Advertisement

ಯಾರೋ ಬರೆದುಕೊಟ್ಟ ಚೀಟಿ ಓದಿ ಏನೇನೋ ಮಾತನಾಡಬೇಡಿ!

03:50 PM Mar 26, 2018 | Team Udayavani |

ಬೆಂಗಳೂರು : ‘ಜೆಡಿಎಸ್‌ ಬಿಜೆಪಿಯ ಬಿ ಟೀಂ’ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ  ನಿನ್ನೆ ಕಿಡಿ ಕಾರಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಇಂದು ಸೋಮವಾರ ‘ಜೆಡಿಎಸ್‌ ಎಂದರೆ ಜನತಾದಳ ಸಂಘ’ ಎಂದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್‌ ರಾಹುಲ್‌ ಗಾಂಧಿ ವಿರುದ್ಧ ಕಿಡಿ ಕಾರಿದ್ದಾರೆ. 

Advertisement

ಎಚ್‌ಡಿಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ  ರಾಹುಲ್‌ ಇನ್ನೂ ಓರ್ವ ಬೆಳೆಯುವ ಯುವ ನಾಯಕ. ಅವರು ಜೀವನದಲ್ಲಿ ಅರ್ಥಮಾಡಿಕೊಳ್ಳಬೇಕು. ಯಾರೋ ಬರೆದುಕೊಟ್ಟ ಚೀಟಿ ಓದಿ ಏನೇನೋ ಮಾತನಾಡುವುದು ಸರಿ ಅಲ್ಲ .ಯೋಚನೆ ಮಾಡಿ ಮಾತನಾಡಬೇಕು.
ನಾನು ಸೋನಿಯಾ ಗಾಂಧಿ ಅವರು ಪ್ರಧಾನಿ ಆಗಬೇಕು ಅಂದವನು, ಅಷ್ಟೂ ಸೌಜನ್ಯ ರಾಹುಲ್‌ ಗಾಂಧಿಗೆ ಇಲ್ಲ ಎಂದು ಕಿಡಿ ಕಾರಿದರು.  

‘ರಾಜ್ಯದಲ್ಲಿ ಇರುವ ಕಾಂಗ್ರೆಸ್‌ ಯಾವುದು ?ಇಂದಿರಾ ಕಾಂಗ್ರೆಸೋ? ಸೋನಿಯಾ ಕಾಂಗ್ರೆಸ್‌ ಇಲ್ಲ  ಸಿದ್ಧರಾಮಯ್ಯ ಕಾಂಗ್ರೆಸ್ಸಾ’ ಎಂದು ಪ್ರಶ್ನಿಸಿದರು. 

ಜೆಡಿಎಸ್‌ನಿಂದ ಸಿಡಿದು ಕಾಂಗ್ರೆಸ್‌ ಸೇರಿದ  ಶಾಸಕರ ಬಗ್ಗೆ ಕಿಡಿ ಕಾರಿ ‘ 7 ಜನ ಎಲ್ಲಿದ್ದರು ನಿನ್ನೆವರೆಗೆ ? ಕಾಂಗ್ರೆಸ್‌ಗೆ ಸೇರಿದ ತಕ್ಷಣ ಪರಿಶುದ್ಧ ವ್ಯಕ್ತಿಗಳಾಗುತ್ತಾರ? ಅವರ ಹಿನ್ನಲೆ ಏನು ಎಂದು ಅರ್ಥ ಮಾಡಿಕೊಳ್ಳುವ ಪ್ರಬುದ್ಧತೆ ರಾಹುಲ್‌ಗೆ ಇಲ್ಲ’ಎಂದರು. 

‘ನಮಗೆ ರಾಹುಲ್‌, ಮೋದಿ ಅವರ ಆದೇಶ ಪಾಲಿಸಬೇಕಾದ ಅಗತ್ಯ ಇಲ್ಲ’ ಎಂದರು. 

Advertisement

‘ನಾವು ಪರಿಶುದ್ಧರಲ್ಲ,ನಮ್ಮ ಮೈ ಕೊಳೆಯಾಗಿದೆ. ರಾಹುಲ್‌ ಗಾಂಧಿ ಸೋಪ್‌ ಕಳುಹಿಸಿ ಕೊಟ್ಟರೆ ತೊಳ್ಕೊಳ್ತೀವಿ’ ಎಂದು ವ್ಯಂಗ್ಯವಾಡಿದರು. 

ಜೆಡಿಎಸ್‌ ಬಿಜೆಪಿಯ “ಬಿ’ ಟೀಂ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತನ್ನ ರಾಜಕೀಯದ ಕೊನೆ ಹೋರಾಟದಲ್ಲಿ “ಎ’ ಟೀಂ ಯಾವುದು, “ಬಿ’ ಟೀಂ ಯಾವುದೆಂಬುದನ್ನು ತೋರಿಸುತ್ತೇನೆ ಎಂದು ಕಿಡಿ ಕಾರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next