Advertisement

ಹಿಂದೂಗಳ ಹತ್ಯೆಯಾದಾಗ ಪ್ರಶಸ್ತಿ ವಾಪಸಿಗಳು ಎಲ್ಲಿದ್ರು?

06:35 AM Feb 07, 2018 | |

ವಿಧಾನಸಭೆ: ಚಿಂತಕ ಎಂ.ಎಂ.ಕಲಬುರ್ಗಿ ಹತ್ಯೆಯಾಗಿ 2 ವರ್ಷ ಕಳೆಯಿತು. ಇನ್ನೂ ಆರೋಪಿಗಳ ಕುರುಹು ಪತ್ತೆಹಚ್ಚಲೂ ರಾಜ್ಯ ಸರ್ಕಾರ ವಿಫ‌ಲವಾಗಿದೆ. ಕಲಬುರ್ಗಿ ಹತ್ಯೆಯಾದಾಗ ಪ್ರಶಸ್ತಿ ವಾಪಸ್‌ ಮಾಡಿದ ಬುದ್ದಿಜೀವಿಗಳು, ವಿಚಾರವಾದಿಗಳು ಹಿಂದೂ ಕಾರ್ಯ
ಕರ್ತರ ಹತ್ಯೆಗಳಾದಾಗ ಎಲ್ಲಿ ಹೋಗಿದ್ದರು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಪ್ರಶ್ನಿಸಿದ್ದಾರೆ.

Advertisement

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಹಿಂದೂ ಕಾರ್ಯಕರ್ತರ ಹತ್ಯೆ ಕುರಿತಂತೆ ಚರ್ಚೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಾತ್ರವಲ್ಲದೆ, ಬುದಿಟಛಿಜೀವಿಗಳ ಬಗ್ಗೆಯೂ ಕಿಡಿ ಕಾರಿದರು. ಎಂ.ಎಂ. ಕಲಬುರ್ಗಿ ಹತ್ಯೆಯಾದಾಗ ಬುದಿಟಛಿಜೀವಿಗಳು, ವಿಚಾರವಾದಿಗಳು
ಪ್ರಶಸ್ತಿ ವಾಪಸ್‌ ಮಾಡಿ ಕೇಂದ್ರ ಸರ್ಕಾರದ ವಿರುದಟಛಿ ಆರೋಪಿಸಿದ್ದರು. ಹಿಂದೂ ಕಾರ್ಯಕರ್ತರೇ ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದರು.
ಆದರೆ, ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗಳಾದಾಗ ಮೌನ ವಾಗಿದ್ದಾರೆ. ಅವರೆಲ್ಲ ಎಲ್ಲಿ ಹೋಗಿದ್ದರು ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next