Advertisement

Prajwal ಪ್ರಚಾರಕ್ಕೆ ಹೋದಾಗ ಬಂಧಿಸದೇ ಕತ್ತೆ ಕಾಯುತ್ತಿದ್ದರಾ?: ಆರ್‌.ಅಶೋಕ್‌

10:05 PM May 24, 2024 | Team Udayavani |

ಬೆಂಗಳೂರು: ಸಂಸದ ಪ್ರಜ್ವಲ್‌ ರೇವಣ್ಣ ಹಾಸನದಲ್ಲಿ ಪ್ರಚಾರಕ್ಕೆ ಹೋದಾಗ, ಮತದಾನ ಮಾಡಿ ಬಂದಾಗ ಅವರನ್ನು ಬಂಧಿಸದೇ ಕತ್ತೆ ಕಾಯುತ್ತಿದ್ದರಾ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

Advertisement

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಜ್ವಲ್‌ನ ಓಡಿ ಹೋಗಲು ಬಿಟ್ಟಿದ್ದೇ ಸಿಎಂ ಸಿದ್ದರಾಮಯ್ಯ. ಪ್ರಜ್ವಲ್‌ ಓಡಿ ಹೋದರೆ ನರೇಂದ್ರ ಮೋದಿ ಅವರನ್ನು ದೂಷಿಸಬಹುದು ಎಂದು ಸುಜೇìವಾಲ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಸೇರಿ ಪೂರ್ವನಿಯೋಜಿತ ಯೋಜನೆ ರೂಪಿಸಿದ್ದರು. ಈ ಸರಕಾರವೇ ಪ್ರಜ್ವಲ್‌ ರೇವಣ್ಣರನ್ನು ವಿದೇಶಕ್ಕೆ ಕಳುಹಿಸಿದೆ ಎಂದು ಆರೋಪಿಸಿದರು.

ಪ್ರಜ್ವಲ್‌ ವಿದೇಶಕ್ಕೆ ಹೋಗುವುದಕ್ಕೂ ಮುನ್ನ ನನ್ನ ಜತೆ ರೇವಣ್ಣ ಮಾತನಾಡಿದ್ದರೆ ತನಿಖೆ ನಡೆಸಲಿ. ನನ್ನ ಹಾಗೂ ಸಿದ್ದರಾಮಯ್ಯ ಫೋನ್‌ ಕಾಲ್‌ ಬಗ್ಗೆ ತನಿಖೆ ಮಾಡಲಿ. ಆಗ ಯಾರು ಯಾರ ಜತೆ ಮಾತನಾಡಿದ್ದರು ಎಂಬುದು ಗೊತ್ತಾಗುತ್ತದೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕೇಂದು ಅಶೋಕ್‌ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next