Advertisement

ಪೇಜಾವರ ಶ್ರೀಗಳಿಗೆ ವಾಟ್ಸ್‌ಆ್ಯಪ್‌ ಬೆದರಿಕೆ

11:41 PM Jul 06, 2019 | Team Udayavani |

ಉಡುಪಿ: ಲಿಂಗಾಯತ, ವೀರಶೈವ ಧರ್ಮ ಹಿಂದೂ ಧರ್ಮದ ಅಂಗ ಎಂದು ಹೇಳಿರುವ ಪೇಜಾವರ ಶ್ರೀಗಳಿಗೆ ವಾಟ್ಸ್‌ಆ್ಯಪ್‌ನಲ್ಲಿ ಗಂಗಾವತಿ ಬಸವ ಸಮಿತಿ ಎಂಬ ಹೆಸರಿನಲ್ಲಿ ಬೆದರಿಕೆ ಬಂದಿದೆ. ಈ ವಿಚಾರದಲ್ಲಿ ನೀವು ತಲೆಹಾಕಬಾರದು ಎಂದು ವಾಟ್ಸ್‌ಆ್ಯಪ್‌ನಲ್ಲಿ ಪೇಜಾವರ ಶ್ರೀಗಳಿಗೆ ಬೆದರಿಕೆ ಸಂದೇಶ ರವಾನಿಸಿದ್ದಾರೆ.

Advertisement

ಪೇಜಾವರ ಶ್ರೀಗಳು ಹೇಳಿಕೆ ನೀಡಿರುವುದನ್ನು ವಿರೋಧಿಸಿರುವ ಈ ಸಂದೇಶದಲ್ಲಿ ಬಸವ ಸಮಿತಿಯವರು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ. ನೀವು ಈ ಬಗ್ಗೆ ಮಾತನಾಡಕೂಡದು ಎಂದು ಎಚ್ಚರಿಕೆ ನೀಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸಂದೇಶಗಳು ಸಾಮಾನ್ಯ, ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದ ಪೊಲೀಸರಿಗೆ ದೂರು ನೀಡಿಲ್ಲ ಎಂದು ಪೇಜಾವರ ಮಠದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next