Advertisement

ನ್ಯಾಯಾಂಗ ತನಿಖೆಯೇ ಆಗಬೇಕು: ಇಬ್ರಾಹಿಂ

10:54 PM Dec 24, 2019 | Team Udayavani |

ಬೆಂಗಳೂರು: ಮಂಗಳೂರು ಗಲಭೆ ಬಗ್ಗೆ ಹೈಕೋರ್ಟ್‌ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಆಗಬೇಕು ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಒತ್ತಾಯಿಸಿದ್ದಾರೆ. ಸುದ್ದಿಗಾರರ ಜತೆಮಾತ  ನಾಡಿ, ಮಂಗಳೂರಿನಲ್ಲಿ ಫೈರಿಂಗ್‌ ಆಗಿರುವುದು ಪೊಲೀಸ್‌ ಸ್ಟೇಷನ್‌ನಿಂದ 2 ಕಿ.ಮೀ. ದೂರದಲ್ಲಿ.

Advertisement

ಅಷ್ಟು ದೂರದಲ್ಲಿ ಇದ್ದವರು ಪೊಲೀಸ್‌ ಸ್ಟೇಷನ್‌ಗೆ ನುಗ್ತಾರೆ ಅಂತ ಇವರಿಗೆ ಹೇಗೆ ಗೊತ್ತಾಯ್ತು ಎಂದು ಪ್ರಶ್ನಿಸಿದರು. ನ್ಯಾಯಾಂಗ ತನಿಖೆ ಆಗದ ಹೊರತು ಸತ್ಯ ಹೊರಬರಲ್ಲ. ಸಿಎಎ ಬಗ್ಗೆ ಅಮಿತ್‌ ಶಾ ಒಂದು ರೀತಿ, ನರೇಂದ್ರ ಮೋದಿ ಒಂದು ರೀತಿ ಹೇಳುತ್ತಿ ದ್ದಾರೆ. ಇವರಲ್ಲೇ ಗೊಂದಲವಿದೆ. ಅದನ್ನು ಮೊದಲು ಪರಿಹಾರ ಮಾಡಿಕೊಳ್ಳಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next