Advertisement

Madras High Court ಸನಾತನ ಧರ್ಮ ಬಗ್ಗೆ ನಿಮ್ಮ ತಿಳುವಳಿಕೆಯ ಆಧಾರವೇನು ?

09:59 PM Nov 08, 2023 | Team Udayavani |

ಚೆನ್ನೈ: ಸನಾತನ ಧರ್ಮ ನಾಶದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್‌ಗೆ ಅದರ ಬಗ್ಗೆ ತಿಳಿವಳಿಕೆಯ ಆಧಾರವೇನು ಎಂದು ಪ್ರಶ್ನಿಸಿದೆ. ಜತೆಗೆ ಈ ನಿಟ್ಟಿನಲ್ಲಿ ಅವರು ನಡೆಸಿದ ಸಂಶೋಧನೆಗಳೇನು ಎಂದು ಮದ್ರಾಸ್‌ ಹೈಕೋರ್ಟ್‌ ಕೇಳಿದೆ.

Advertisement

ಉದಯನಿಧಿ ಸ್ಟಾಲಿನ್‌ ಹೇಳಿಕೆ ಪ್ರಶ್ನಿಸಿ ಸಂಘಟನೆಯೊಂದು ಪ್ರಶ್ನಿಸಿ ಸಲ್ಲಿಸಿದ್ದ 3 ರಿಟ್‌ ಅರ್ಜಿಗಳನ್ನು ನ್ಯಾ.ಅನಿತಾ ಸುಮಂತ್‌ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿತು. ಈ ವೇಳೆ ಸನಾತನ ಧರ್ಮದ ಕುರಿತಾದ ತಮ್ಮ ಭಾಷಣದಲ್ಲಿ ಉದಯಾನಿಧಿ ಅವರು ಏನೆಲ್ಲಾ ಮಾತನಾಡಿದ್ದರೋ ಅದರ ಟೈಪ್‌ ಮಾಡಿದ ಪ್ರತಿಯನ್ನು ಸಲ್ಲಿಸುವಂತೆ ಸೂಚಿಸಿತು.

ಧರ್ಮವನ್ನು – ಸನಾತನ ಧರ್ಮದೊಂದಿಗೆ ಸಮೀಕರಿಸುವ ಹೇಳಿಕೆಗಳು ಬಂದದ್ದು ಹೇಗೆ, ಯಾವ ಅಧ್ಯಯನದ ಆಧಾರದ ಮೇಲೆ ಸನಾತನ ಧರ್ಮವನ್ನು ಸ್ಟಾಲಿನ್‌ ಅರ್ಥೈಸಿಕೊಂಡಿದ್ದಾರೆ ಎಂಬುದನ್ನೂ ತಿಳಿಸಬೇಕು ಎಂದು ನ್ಯಾಯಪೀಠ ಉದಯನಿಧಿಗೆ ತಾಕೀತು ಮಾಡಿದೆ.

ಸೆ.2ರಂದು ಉದಯಾನಿಧಿ ಡೆಂಗ್ಯೂ , ಸೊಳ್ಳೆ, ಮಲೇರಿಯಾ ಅಥವಾ ಕೊರೊನಾ ವೈರಸ್‌ ನಿರ್ಮೂಲನೆ ಮಾಡುವಂತೆಯೇ ನಾವು ಸನಾತನ ಧರ್ಮವನ್ನೂ ನಿರ್ಮೂಲನೆ ಮಾಡಬೇಕಿದೆ ಹೇಳಿ ವಿವಾದ ಸೃಷ್ಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next