Advertisement

ವಿಟಿಯು ವಿಭಜನೆ ಅಗತ್ಯ ಏನಿದೆ?

01:24 AM Feb 14, 2019 | Team Udayavani |

ವಿಧಾನಪರಿಷತ್‌: ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಹಣಕಾಸು, ನಗರಾಭಿವೃದ್ಧಿ , ಉನ್ನತ ಶಿಕ್ಷಣ ಸೇರಿ ಎಲ್ಲ ಪ್ರಮುಖ ಖಾತೆಗಳು ದಕ್ಷಿಣ ಕರ್ನಾಟಕಕ್ಕೆ.ಸಕ್ಕರೆ, ಈರುಳ್ಳಿ, ಬೆಳ್ಳುಳ್ಳಿ ಎಲ್ಲಾ ಉತ್ತರ ಕರ್ನಾಟಕಕ್ಕೆ. ಯಾಕೆ ಹೀಗೆ? ಇದಕ್ಕೆ ಜನರಾದರೂ ಏನಂತಾರೆ? ಸ್ವಲ್ಪ ಯೋಚನೆ ಮಾಡಿ…- ಸ್ವತಃ ಕಾಂಗ್ರೆಸ್‌ ಸದಸ್ಯ ಎಸ್‌.ಆರ್‌. ಪಾಟೀಲ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರೀತಿ ಇದು.

Advertisement

ಬುಧವಾರ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಮಹಾಂತೇಶ ಕವಟಗಿಮಠ ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವಿಭಜನೆ ಬಗ್ಗೆ ಪ್ರಸ್ತಾಪಿಸಿದರು. ಆಗ ಇದಕ್ಕೆ ಪೂರಕವಾಗಿ ಮಾತನಾಡಿದ ಎಸ್‌.ಆರ್‌.ಪಾಟೀಲ್‌, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದನ್ನು ವಿಭಜಿಸುವ ಅವಶ್ಯಕತೆ ಏನಿದೆ? ಇದು ಅತ್ಯಂತ ಸೂಕ್ಷ್ಮವಾದ ವಿಷಯವಾಗಿದೆ. ಈಗಾಗಲೇ ಪ್ರಮುಖ ಖಾತೆಗಳೆಲ್ಲವೂ ದಕ್ಷಿಣ ಕರ್ನಾಟಕದವರ ಪಾಲಾಗಿವೆ. ಉತ್ತರ ಕರ್ನಾಟಕಕ್ಕೆ ಬರೀ ಸಕ್ಕರೆ,ಈರುಳ್ಳಿ, ಬೆಳ್ಳುಳ್ಳಿಯಂತಹ ಖಾತೆಗಳು ಉಳಿದಿವೆ. ಈಗ ವಿವಿಯನ್ನೂ ಆ ಕಡೆ ತೆಗೆದುಕೊಂಡು ಹೋಗುತ್ತಿದ್ದೀರಿ. ಜನ ಏನಂತಾರೆ ಸ್ವಲ್ಪ ಯೋಚಿಸಿ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಬಿಜೆಪಿ ಸದಸ್ಯ ಅರುಣ ಶಹಾಪೂರ ಮತ್ತಿತರ ಸದಸ್ಯರು ಕೂಡ ದನಿಗೂಡಿಸಿದರು. ಇದು ಅತ್ಯಂತ ಗಂಭೀರ ಪರಿಣಾಮ ಬೀರಲಿದ್ದು, ಬೆಳಗಾವಿ ಮತ್ತು ಉತ್ತರ ಕರ್ನಾಟಕದಲ್ಲಿ ಕಳೆದ ಮೂರು ದಿನಗಳಿಂದ ವಿದ್ಯಾರ್ಥಿಗಳು, ಉಪನ್ಯಾಸಕರು, ಸಾರ್ವಜನಿಕರು ಈ ವಿಭಜನೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕವಟಗಿಮಠ ಸಭೆಯ ಗಮನಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next