Advertisement

ಪ್ರಧಾನಿ ಜನತಾ ಕರ್ಫ್ಯೂ ಕರೆಗೆ ಭರ್ಜರಿ ಬೆಂಬಲ; ಭಾನುವಾರ ಬಹುತೇಕ ಕರ್ನಾಟಕ ಸ್ತಬ್ಧ

07:52 PM Mar 21, 2020 | Nagendra Trasi |

ನವದೆಹಲಿ/ಬೆಂಗಳೂರು: ಕೊರೊನಾ ವೈರಸ್ ಮಹಾಮಾರಿ ಭೀತಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜನತಾ ಕರ್ಫ್ಯೂಗೆ ನೀಡಿದ ಕರೆಗೆ ಎಲ್ಲೆಡೆ ಭರ್ಜರಿ ಬೆಂಬಲ ವ್ಯಕ್ತವಾಗತೊಡಗಿದೆ.

Advertisement

ನಾನು ದೇಶದ ಪ್ರತಿಯೊಬ್ಬ ಪ್ರಜೆಯಿಂದ ಮತ್ತೊಂದು ಬೆಂಬಲದ ನಿರೀಕ್ಷೆಯಲ್ಲಿದ್ದೇನೆ. ಇದೊಂದು ಜನತಾ ಕರ್ಫ್ಯೂ..ಇದು ಜನರೇ ಸ್ವಯಂ ಆಗಿ ವಿಧಿಸಿಕೊಳ್ಳುವ ಕರ್ಫ್ಯೂ. ಎಲ್ಲರೂ ಮನೆಯಲ್ಲೇ ಇರುವ ಮೂಲಕ ಕೊರೊನಾ-19 ಸೋಂಕು ಮಾರಿ ತಡೆಗೆ ಬೆಂಬಲ ನೀಡಬೇಕು ಎಂದು ಪ್ರಧಾನಿ ವಿನಂತಿಸಿಕೊಂಡಿದ್ದರು.

ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9ಗಂಟೆವರೆಗೆ ಮನೆಯಿಂದ ಹೊರಬರದಂತೆ ಪ್ರಧಾನಿ ಗುರುವಾರ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ವೇಳೆ ಮನವಿ ಮಾಡಿಕೊಂಡಿದ್ದರು.

ಭಾನುವಾರ ಬಹುತೇಕ ಕರ್ನಾಟಕ ಸ್ತಬ್ಧ:

ಮಾರ್ಚ್ 21ರ ರಾತ್ರಿಯೇ ಸರ್ಕಾರಿ ಬಸ್ ಗಳು ಡಿಪೋ ಸೇರಲಿದ್ದು, ಅಗತ್ಯ ಬಿದ್ದಲ್ಲಿ ಮಾತ್ರ ಒಂದೆರಡು ಬಸ್ ಗಳು ಸಂಚರಿಸಲಿವೆ ಎಂದು ವರದಿ ತಿಳಿಸಿದೆ. ಮುಂಗಡ ಟಿಕೆಟ್ ಕಾಯ್ದಿರಿಸಿದ್ದಲ್ಲಿ ಮಾತ್ರ ಬಸ್ ಸಂಚಾರ ಇರಲಿದೆ ಎಂದು ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Advertisement

ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಹೋಟೆಲ್ ಮಾಲೀಕರ ಸಂಘ, ಉಬರ್, ಓಲಾ ಕ್ಯಾಬ್ ಸಂಘಟನೆ ಸೇರಿದಂತೆ ಇಂದಿರಾ ಕ್ಯಾಂಟೀನ್ ಬಂದ್ ಮಾಡುವುದಾಗಿ ತಿಳಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿವೆ.

ಬೆಂಗಳೂರಿನಲ್ಲಿ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಗಳು ಈಗಾಗಲೇ ಬಂದ್ ಆಗಿದ್ದು, ಭಾನುವಾರ ಮೆಟ್ರೋ ಸಂಚಾರ ಕೂಡಾ ಬಂದ್ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next