Advertisement

Golden Star; ಬರ್ತ್‌ಡೇ ದಿನ ಗಣೇಶ್‌ ಏನ್‌ ಮಾಡಿದ್ರು ಗೊತ್ತಾ?

10:33 AM Jul 13, 2024 | |

ನಟ ಗಣೇಶ್‌ ಅವರು ಜುಲೈ 2ರಂದು ತಮ್ಮ ಹುಟ್ಟುಹಬ್ಬ ಆಚರಿಸಿಲ್ಲ. ಸಹಜವಾಗಿಯೇ ಅವರ ಅಭಿಮಾನಿಗಳು ಬೇಸರಗೊಂಡಿದ್ದರು. ಆದರೆ, ಸದ್ದಿಲ್ಲದೇ ಒಂದಷ್ಟು ಸಮಾಜಮುಖೀ ಕಾರ್ಯದಲ್ಲಿ ತೊಡಗುವ ಮೂಲಕ ಗಣೇಶ್‌ ಬರ್ತ್‌ಡೇಯನ್ನು ಅರ್ಥಪೂರ್ಣಗೊಳಿಸಿದ್ದಾರೆ.  ಗಣೇಶ್‌ ಅವರ ತಂಡ ಶಾಲಾ ಮಕ್ಕಳಿಗೆ ಬ್ಯಾಗ್‌, ಪುಸ್ತಕಗಳನ್ನು ಹಂಚಿದೆ. ಈ ಮೂಲಕ ಮಕ್ಕಳ ಕಲಿಕೆಗೆ ಸಹಾಯ ಮಾಡಿದೆ.

Advertisement

ಇನ್ನು, ಜುಲೈ 12 ಗಣೇಶ್‌ ಪತ್ನಿ ಶಿಲ್ಪಾ ಅವರ ಹುಟ್ಟುಹಬ್ಬ. ತಮ್ಮ ಆಪ್ತ ಬಳಗದೊಂದಿಗೆ ಆಚರಿಸಿದ್ದಾರೆ. ಸದ್ಯ ಗಣೇಶ್‌ ಅವರ “ಕೃಷ್ಣಂ ಪ್ರಣಯ ಸಖೀ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಆಗಸ್ಟ್‌ 15ರಂದು ತೆರೆಕಾಣುತ್ತಿದೆ. ಪಕ್ಕಾ ಫ್ಯಾಮಿಲಿ ಡ್ರಾಮಾ ಆಗಿರುವ ಈ ಚಿತ್ರವನ್ನು ಶ್ರೀನಿವಾಸರಾಜು ನಿರ್ದೇಶನ ಮಾಡಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌, ಹಾಡುಗಳು ಹಿಟ್‌ಲಿಸ್ಟ್‌ ಸೇರುವ ಮೂಲಕ ಚಿತ್ರತಂಡ ಖುಷಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next